ರಾಜ್ಯ ಸರ್ಕಾರ ₹ 69 ಕೋಟಿ ವೆಚ್ಚದಲ್ಲಿ ಉಡುತಡಿಯ ಪರಿಸರವನ್ನು ದೆಹಲಿಯ ‘ಅಕ್ಷರ ಧಾಮ’ದ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿದೆ. ಅಕ್ಕಮಹಾದೇವಿಯ ಪ್ರತಿಮೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಶಿವಮೊಗ್ಗದ ಶಿಲ್ಪಿ ಶ್ರೀಧರಮೂರ್ತಿ ಈ ಪ್ರತಿಮೆಯನ್ನು ಕಾಂಕ್ರೀಟ್ನಿಂದ ರೂಪಿಸಿದ್ದು, ಇಷ್ಟಲಿಂಗ ಹಿಡಿದು ಕುಳಿತಿರುವ ಭಂಗಿಯ ಅಕ್ಕಮಹಾದೇವಿಯ ಪ್ರತಿಮೆ ಕಂಚಿನ ಬಣ್ಣದಲ್ಲಿ ಒಡಮೂಡಿದೆ. ಪ್ರತಿಮೆಯನ್ನು 14 ಅಡಿಯ ಸ್ತಂಭದ ಮೇಲೆ ಪ್ರತಿಷ್ಠಾಪಿಸಲಾಗಿದೆ.