6ರಂದು ಸಂಜೆ 5.45 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹೈದರಾಬಾದ್ನ ಸೂರ್ಯಪ್ರಕಾಶ್ ಅವರಿಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 6 ರಿಂದ 8 ಗಂಟೆಯವರೆಗೆ ಶಂಕರ ಮಹಾದೇವನ್, ಸಿದ್ಧಾರ್ಥ ಮಹಾದೇವನ್, ಶಿವಂ ಮಹಾದೇವನ್ ಅವರು ಚಿತ್ರ ರಸಸಂಜೆ ಪ್ರಸ್ತುತಪಡಿಸುವರು. ರಾತ್ರಿ 9 ಗಂಟೆಯಿಂದ ಭರತನಾಟ್ಯ, ಮಣಿಪುರದ ಧೋಲ್ ಚಲಮ್, ಪಂಜಾಬಿನ ಬಾಂಗ್ಡಾ ನೃತ್ಯ, ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗೊಳ್ಳಲಿವೆ.