‘ಆರೋಪಿಗಳು ಆಡುಗೋಡಿ ಹಾಗೂ ಎಚ್ಎಸ್ಆರ್ ಬಡವಾಣೆ ನಿವಾಸಿಗಳು. ತಮಿಳುನಾಡಿನಿಂದ ವಾಹನದಲ್ಲಿ ಆಂಬರ್ಗ್ರೀಸ್ ತರುತ್ತಿದ್ದ ಅವರು ಅದನ್ನು ನಗರದ ವಿವಿಧ ಭಾಗಗಳಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ವಿಐಟಿ ರಸ್ತೆಯ ಗಂಗಾನಗರ ವೃತ್ತದಲ್ಲಿ ಇದನ್ನು ಮಾರುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅದರ ಆಧಾರದಲ್ಲಿ ದಾಳಿ ನಡೆಸಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.