ಖಾನಾಪುರ ತಾಲ್ಲೂಕು ಗಂದಿಗವಾಡ ಗ್ರಾಮದ ಅಶೋಕ ಯಮಕನಮರಡಿ, ರೈತ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ವಿವಿಧ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಚೆಗೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಿದ್ದ ಜನತಾದರ್ಶನ ವೇಳೆ, ರೈತರು ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅವರಿಂದ, ಮುಖ್ಯಮಂತ್ರಿ ಮನವಿಯನ್ನೂ ಸ್ವೀಕರಿಸಿದ್ದರು.