ಹಾಸನದಲ್ಲಿ ಕೊಲೆ: ‘ಪತ್ರಿಕಾಗೋಷ್ಠಿ ವೇಳೆ ವೇದಿಕೆಗೆ ನುಗ್ಗಿದ್ದ ಆರೋಪಿ ಶಿವಕುಮಾರ್, ರಾಕೇಶ್ ಅವರ ಮೇಲೆ ಹಲ್ಲೆ ಮಾಡಿದ್ದ. ಕೃತ್ಯ ತಡೆದಿದ್ದ ರೈತ ಸಂಘಟನೆ ಕಾರ್ಯಕರ್ತರಿಗೂ ಕುರ್ಚಿಯಿಂದ ಹೊಡೆದಿದ್ದ. ಇದ ರಿಂದಾಗಿ ಪರಸ್ಪರ ಮಾರಾಮಾರಿ ನಡೆದಿತ್ತು. ಆರೋಪಿ ಶಿವಕುಮಾರ್, ಹಾಸನದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಆರೋಪ ಸಾಬೀತಾಗಿದ್ದರಿಂದ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಕೆಲ ವರ್ಷ ಜೈಲಿನಲ್ಲಿದ್ದ ಆರೋಪಿ, ಸನ್ನಡತೆ ಆಧಾರದಲ್ಲಿ 2015ರಲ್ಲಿ ಬಿಡುಗಡೆಯಾಗಿದ್ದ.’ ಎಂದು ಪೊಲೀಸರು ತಿಳಿಸಿದರು.