<p>ಬೆಂಗಳೂರು: ‘ಸರ್ವ ಪಕ್ಷದ ಅಧಿಕೃತ ವಿರೋಧ ಪಕ್ಷದ ನಾಯಕ ನಾನೇ’ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.</p>.<p>ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಬಿಜೆಪಿ ಅರವಿಂದ ಬೆಲ್ಲದ ಮಾತನಾಡುವಾಗ ಮಧ್ಯ ಪ್ರವೇಶಿಸಿದ ಯತ್ನಾಳ್ ಅವರು ಪಿಎಸ್ಐ ನೇಮಕಾತಿ ಹಗರಣ ಮತ್ತು ಕಾಂಗ್ರೆಸ್ ಅವಧಿಯ ಶೇ 40 ಕಮಿಷನ್ ಆರೋಪವನ್ನು ಪ್ರಸ್ತಾಪಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ‘ಪಿಎಸ್ಐ ತನಿಖೆಗೆ ಸಾಕ್ಷಿ ಕೊಡಿ ಎಂದರೆ ಹೋಗಲೇ ಇಲ್ಲ. ಬಿಜೆಪಿ ಕಾಲದ ಶೇ 40 ರಷ್ಟು ಕಮಿಷನ್ ತನಿಖೆ ನಡೆಯುತ್ತಿದೆ. ಎಷ್ಟು ನುಂಗಿದ್ದಾರೆ ಎಂದರೆ ಅದರ ಆಳ– ಆಗಲವೇ ಗೊತ್ತಾಗುತ್ತಿಲ್ಲ’ ಎಂದರು. </p>.<p>‘ಪಿಎಸ್ಐ ಹಗರಣದ ತನಿಖೆಯನ್ನು ಸಿಬಿಐಗೆ ಕೊಡಿ’ ಎಂದು ಯತ್ನಾಳ್ ಸವಾಲು ಹಾಕಿದರು.</p>.<p>'ಪಿಎಸ್ಐ, ಶೇ 40 ಕಮಿಷನ್, ಕೊರೊನಾ, ಪರುಶುರಾಮ್ ಥೀಮ್ ಪಾರ್ಕ್ನಿಂದ ಹಿಡಿದು ಎಲ್ಲವೂ ತನಿಖೆ ಆಗುತ್ತದೆ. ಯತ್ನಾಳ್ ಸಾಹೇಬ್ರು ಕೋ–ಆಪರೇಟ್ ಮಾಡಿದ್ರೆ ನಾಳೆನೇ ತನಿಖೆ ಮುಗಿದು ಹೋಗುತ್ತದೆ’ ಎಂದು ಪ್ರಿಯಾಂಕ್ ಹೇಳಿದರು.</p>.<p>‘ಈ ಸರ್ಕಾರ ಬಂದ ಮೇಲೆ ಶೇ 40 ರಷ್ಟು ಕಮಿಷನ್ ಚಾಲೂ ಆಗಿದೆ. ರಾಜ್ಯದಲ್ಲಿ ಸರ್ವ ಪಕ್ಷದ ಅಧಿಕೃತ ವಿರೋಧ ಪಕ್ಷದ ನಾಯಕ ನಾನೇ’ ಎಂದು ಯತ್ನಾಳ್ ಹಾಸ್ಯ ಚಟಾಕಿ ಹಾರಿಸಿದರು.</p>.<p>‘ಒಬ್ಬೊಬ್ಬರೇ ಕಾಂಗ್ರೆಸ್ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಮುಂದೆ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಸೇರಿದರೂ ಅಚ್ಚರಿ ಇಲ್ಲ’ ಎಂದು ಯತ್ನಾಳ್ ಹೇಳಿದಾಗ, ‘ನಮ್ಮ ಹೆಣವೂ ಬಿಜೆಪಿ ಕಚೇರಿಗೆ ಹೋಗಲ್ಲ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಸರ್ವ ಪಕ್ಷದ ಅಧಿಕೃತ ವಿರೋಧ ಪಕ್ಷದ ನಾಯಕ ನಾನೇ’ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.</p>.<p>ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಬಿಜೆಪಿ ಅರವಿಂದ ಬೆಲ್ಲದ ಮಾತನಾಡುವಾಗ ಮಧ್ಯ ಪ್ರವೇಶಿಸಿದ ಯತ್ನಾಳ್ ಅವರು ಪಿಎಸ್ಐ ನೇಮಕಾತಿ ಹಗರಣ ಮತ್ತು ಕಾಂಗ್ರೆಸ್ ಅವಧಿಯ ಶೇ 40 ಕಮಿಷನ್ ಆರೋಪವನ್ನು ಪ್ರಸ್ತಾಪಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ‘ಪಿಎಸ್ಐ ತನಿಖೆಗೆ ಸಾಕ್ಷಿ ಕೊಡಿ ಎಂದರೆ ಹೋಗಲೇ ಇಲ್ಲ. ಬಿಜೆಪಿ ಕಾಲದ ಶೇ 40 ರಷ್ಟು ಕಮಿಷನ್ ತನಿಖೆ ನಡೆಯುತ್ತಿದೆ. ಎಷ್ಟು ನುಂಗಿದ್ದಾರೆ ಎಂದರೆ ಅದರ ಆಳ– ಆಗಲವೇ ಗೊತ್ತಾಗುತ್ತಿಲ್ಲ’ ಎಂದರು. </p>.<p>‘ಪಿಎಸ್ಐ ಹಗರಣದ ತನಿಖೆಯನ್ನು ಸಿಬಿಐಗೆ ಕೊಡಿ’ ಎಂದು ಯತ್ನಾಳ್ ಸವಾಲು ಹಾಕಿದರು.</p>.<p>'ಪಿಎಸ್ಐ, ಶೇ 40 ಕಮಿಷನ್, ಕೊರೊನಾ, ಪರುಶುರಾಮ್ ಥೀಮ್ ಪಾರ್ಕ್ನಿಂದ ಹಿಡಿದು ಎಲ್ಲವೂ ತನಿಖೆ ಆಗುತ್ತದೆ. ಯತ್ನಾಳ್ ಸಾಹೇಬ್ರು ಕೋ–ಆಪರೇಟ್ ಮಾಡಿದ್ರೆ ನಾಳೆನೇ ತನಿಖೆ ಮುಗಿದು ಹೋಗುತ್ತದೆ’ ಎಂದು ಪ್ರಿಯಾಂಕ್ ಹೇಳಿದರು.</p>.<p>‘ಈ ಸರ್ಕಾರ ಬಂದ ಮೇಲೆ ಶೇ 40 ರಷ್ಟು ಕಮಿಷನ್ ಚಾಲೂ ಆಗಿದೆ. ರಾಜ್ಯದಲ್ಲಿ ಸರ್ವ ಪಕ್ಷದ ಅಧಿಕೃತ ವಿರೋಧ ಪಕ್ಷದ ನಾಯಕ ನಾನೇ’ ಎಂದು ಯತ್ನಾಳ್ ಹಾಸ್ಯ ಚಟಾಕಿ ಹಾರಿಸಿದರು.</p>.<p>‘ಒಬ್ಬೊಬ್ಬರೇ ಕಾಂಗ್ರೆಸ್ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಮುಂದೆ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಸೇರಿದರೂ ಅಚ್ಚರಿ ಇಲ್ಲ’ ಎಂದು ಯತ್ನಾಳ್ ಹೇಳಿದಾಗ, ‘ನಮ್ಮ ಹೆಣವೂ ಬಿಜೆಪಿ ಕಚೇರಿಗೆ ಹೋಗಲ್ಲ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>