<p>ಬಳ್ಳಾರಿ: ಸಮೀಪದ ಚಾಗನೂರಿನಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು (ಎಡಿಪಿ) ಚೆನ್ನೈ ಮೂಲದ ‘ಮಾರ್ಗ್’ ಕಂಪನಿ ಜತೆ ಮಾಡಿಕೊಂಡಿದ್ದ ಒಪ್ಪಂದ ವನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ. ಕಾರ್ಯಕ್ಷಮತೆ ಭದ್ರತೆಗೆ ಕಂಪನಿ ಇಟ್ಟಿದ್ದ ₹4 ಕೋಟಿ ಬ್ಯಾಂಕ್ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.</p>.<p>ಮೂಲಸೌಲಭ್ಯ ಇಲಾಖೆ (ಐಡಿಡಿ) ಏಪ್ರಿಲ್ 4ರಂದು ‘ಮಾರ್ಗ್’ ಜತೆಗಿನ ಒಪ್ಪಂದ ರದ್ದತಿಗೆ ಶಿಫಾರಸು ಮಾಡಿತ್ತು. ನ.2 ರಂದು ಸೇರಿದ್ದ ಸಂಪುಟ ಸಭೆಯಲ್ಲಿ ಶಿಫಾರಸಿಗೆ ಅನುಮತಿ ದೊರೆತಿದ್ದರಿಂದ ಒಪ್ಪಂದ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ.</p>.<p>‘ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ’ವೇ (ಕೆಎಸ್ಐಐಡಿಸಿ) ಸ್ಪರ್ಧಾತ್ಮಕ ಬಿಡ್ ಕರೆದು ‘ಇಪಿಸಿ ಮಾದರಿ’ ಯಲ್ಲಿ ವಿಮಾನ ನಿಲ್ದಾಣ ಯೋಜನೆ ಅನುಷ್ಠಾನ ಮಾಡಲಿದೆ.</p>.<p>ಚಾಗನೂರಿನಲ್ಲಿ ಸ್ವಾಧೀನ ಮಾಡಿಕೊಂಡಿರುವ 987 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು 2010ರ ಆಗಸ್ಟ್ 6ರಂದು ಚೆನ್ನೈ ಮೂಲದ ‘ಮಾರ್ಗ್’ ಜತೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. 13 ವರ್ಷ ಕಳೆದರೂ ಯೋಜನೆ ಪ್ರಗತಿ ಕಾಣದಿದ್ದರಿಂದ ಒಪ್ಪಂದ ರದ್ದಾಗಿದೆ.</p>.<p>‘ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲ ಅವಕಾಶ ಮತ್ತು ಅನುಕೂಲ ಮಾಡಿಕೊಟ್ಟರೂ ₹ 1 ಲಕ್ಷ ಈಕ್ವಿಟಿಯಲ್ಲಿ ಹೂಡಿದ್ದು ಬಿಟ್ಟರೆ ಕಂಪನಿ ಯಾವುದೇ ಹೂಡಿಕೆ ಮಾಡದಿರುವುದು ಗಮನಿಸಿ<br />ದರೆ ಯೋಜನೆ ಕಾರ್ಯಗತಗೊಳಿ ಸಲು ಆರ್ಥಿಕ ಶಕ್ತಿ ಇಲ್ಲವೆಂಬುದು ಖಚಿತವಾಗುತ್ತದೆ’ ಎಂದು ಐಡಿಡಿ ಹೊರಡಿಸಿರುವ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆ ರದ್ದು ಆದೇಶ ದಲ್ಲಿ ಹೇಳಲಾಗಿದೆ.</p>.<p>‘ಮಾರ್ಗ್’ಗೆ ಜೂನ್ 8ರಂದು ವಿಮಾನ ನಿಲ್ದಾಣ ಯೋಜನೆ ವಿಳಂಬವಾಗಿರುವ ಕುರಿತು ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಕಂಪನಿ ನೋಟಿಸ್ಗೆ ನೀಡಿದ್ದ ಉತ್ತರ ತೃಪ್ತಿಕರವಾಗಿರಲಿಲ್ಲ. ಬಳಿಕ ಕಾನೂನು ಮತ್ತು ಆರ್ಥಿಕ ಇಲಾಖೆ ಒಪ್ಪಿಗೆ ಪಡೆದು ಐಡಿಡಿ ಒಪ್ಪಂದ ರದ್ದುಪಡಿಸಲು ಶಿಫಾರಸು ಮಾಡಿತ್ತು.</p>.<p><strong>ವಿಮಾನ ನಿಲ್ದಾಣ ಮುಂದೇನು?</strong></p>.<p>ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗೆ ‘ಕನ್ಸಲ್ಟೆಂಟ್’ ನೇಮಕವಾಗಲಿದೆ. ಈ ಕನ್ಸಲ್ಟೆಂಟ್ ಸಮೀಕ್ಷೆ ನಡೆಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಿದ್ದು, ಇದು ಅಂದಾಜು ವೆಚ್ಚ ಮತ್ತಿತರ ವಿವರ ಒಳಗೊಂಡಿರುತ್ತದೆ.</p>.<p>ಡಿಪಿಆರ್ ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಹೋಗಲಿದೆ. ಸಂಪುಟ ಒಪ್ಪಿಗೆಯ ಬಳಿಕ ಕೆಎಸ್ಐಐಡಿಸಿ ಸ್ಪರ್ಧಾತ್ಮಕ ಬಿಡ್ ಕರೆಯಲಿದೆ. ಆನಂತರ ಕಾಮಗಾರಿ ಆರಂಭವಾಗಲಿದೆ. ಎರಡು ಪ್ಯಾಕೇಜ್ಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯಲಿದೆ.</p>.<p>ಎಲ್ಲವೂ ತ್ವರಿತಗತಿಯಲ್ಲಿ ನಡೆದರೆ ನಾಲ್ಕೈದು ತಿಂಗಳಿಗೆ ವಿಮಾನ ನಿಲ್ದಾಣ ಯೋಜನೆ ಡಿಪಿಆರ್ ಸಿದ್ಧ ಆಗಿ ಸಂಪುಟದ ಒಪ್ಪಿಗೆ ದೊರೆಯಬಹುದು ಎಂದು ಕೆಎಸ್ಐಐಡಿಸಿ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳ್ಳಾರಿ: ಸಮೀಪದ ಚಾಗನೂರಿನಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು (ಎಡಿಪಿ) ಚೆನ್ನೈ ಮೂಲದ ‘ಮಾರ್ಗ್’ ಕಂಪನಿ ಜತೆ ಮಾಡಿಕೊಂಡಿದ್ದ ಒಪ್ಪಂದ ವನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ. ಕಾರ್ಯಕ್ಷಮತೆ ಭದ್ರತೆಗೆ ಕಂಪನಿ ಇಟ್ಟಿದ್ದ ₹4 ಕೋಟಿ ಬ್ಯಾಂಕ್ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.</p>.<p>ಮೂಲಸೌಲಭ್ಯ ಇಲಾಖೆ (ಐಡಿಡಿ) ಏಪ್ರಿಲ್ 4ರಂದು ‘ಮಾರ್ಗ್’ ಜತೆಗಿನ ಒಪ್ಪಂದ ರದ್ದತಿಗೆ ಶಿಫಾರಸು ಮಾಡಿತ್ತು. ನ.2 ರಂದು ಸೇರಿದ್ದ ಸಂಪುಟ ಸಭೆಯಲ್ಲಿ ಶಿಫಾರಸಿಗೆ ಅನುಮತಿ ದೊರೆತಿದ್ದರಿಂದ ಒಪ್ಪಂದ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ.</p>.<p>‘ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ’ವೇ (ಕೆಎಸ್ಐಐಡಿಸಿ) ಸ್ಪರ್ಧಾತ್ಮಕ ಬಿಡ್ ಕರೆದು ‘ಇಪಿಸಿ ಮಾದರಿ’ ಯಲ್ಲಿ ವಿಮಾನ ನಿಲ್ದಾಣ ಯೋಜನೆ ಅನುಷ್ಠಾನ ಮಾಡಲಿದೆ.</p>.<p>ಚಾಗನೂರಿನಲ್ಲಿ ಸ್ವಾಧೀನ ಮಾಡಿಕೊಂಡಿರುವ 987 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು 2010ರ ಆಗಸ್ಟ್ 6ರಂದು ಚೆನ್ನೈ ಮೂಲದ ‘ಮಾರ್ಗ್’ ಜತೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. 13 ವರ್ಷ ಕಳೆದರೂ ಯೋಜನೆ ಪ್ರಗತಿ ಕಾಣದಿದ್ದರಿಂದ ಒಪ್ಪಂದ ರದ್ದಾಗಿದೆ.</p>.<p>‘ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲ ಅವಕಾಶ ಮತ್ತು ಅನುಕೂಲ ಮಾಡಿಕೊಟ್ಟರೂ ₹ 1 ಲಕ್ಷ ಈಕ್ವಿಟಿಯಲ್ಲಿ ಹೂಡಿದ್ದು ಬಿಟ್ಟರೆ ಕಂಪನಿ ಯಾವುದೇ ಹೂಡಿಕೆ ಮಾಡದಿರುವುದು ಗಮನಿಸಿ<br />ದರೆ ಯೋಜನೆ ಕಾರ್ಯಗತಗೊಳಿ ಸಲು ಆರ್ಥಿಕ ಶಕ್ತಿ ಇಲ್ಲವೆಂಬುದು ಖಚಿತವಾಗುತ್ತದೆ’ ಎಂದು ಐಡಿಡಿ ಹೊರಡಿಸಿರುವ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆ ರದ್ದು ಆದೇಶ ದಲ್ಲಿ ಹೇಳಲಾಗಿದೆ.</p>.<p>‘ಮಾರ್ಗ್’ಗೆ ಜೂನ್ 8ರಂದು ವಿಮಾನ ನಿಲ್ದಾಣ ಯೋಜನೆ ವಿಳಂಬವಾಗಿರುವ ಕುರಿತು ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಕಂಪನಿ ನೋಟಿಸ್ಗೆ ನೀಡಿದ್ದ ಉತ್ತರ ತೃಪ್ತಿಕರವಾಗಿರಲಿಲ್ಲ. ಬಳಿಕ ಕಾನೂನು ಮತ್ತು ಆರ್ಥಿಕ ಇಲಾಖೆ ಒಪ್ಪಿಗೆ ಪಡೆದು ಐಡಿಡಿ ಒಪ್ಪಂದ ರದ್ದುಪಡಿಸಲು ಶಿಫಾರಸು ಮಾಡಿತ್ತು.</p>.<p><strong>ವಿಮಾನ ನಿಲ್ದಾಣ ಮುಂದೇನು?</strong></p>.<p>ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗೆ ‘ಕನ್ಸಲ್ಟೆಂಟ್’ ನೇಮಕವಾಗಲಿದೆ. ಈ ಕನ್ಸಲ್ಟೆಂಟ್ ಸಮೀಕ್ಷೆ ನಡೆಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಿದ್ದು, ಇದು ಅಂದಾಜು ವೆಚ್ಚ ಮತ್ತಿತರ ವಿವರ ಒಳಗೊಂಡಿರುತ್ತದೆ.</p>.<p>ಡಿಪಿಆರ್ ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಹೋಗಲಿದೆ. ಸಂಪುಟ ಒಪ್ಪಿಗೆಯ ಬಳಿಕ ಕೆಎಸ್ಐಐಡಿಸಿ ಸ್ಪರ್ಧಾತ್ಮಕ ಬಿಡ್ ಕರೆಯಲಿದೆ. ಆನಂತರ ಕಾಮಗಾರಿ ಆರಂಭವಾಗಲಿದೆ. ಎರಡು ಪ್ಯಾಕೇಜ್ಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯಲಿದೆ.</p>.<p>ಎಲ್ಲವೂ ತ್ವರಿತಗತಿಯಲ್ಲಿ ನಡೆದರೆ ನಾಲ್ಕೈದು ತಿಂಗಳಿಗೆ ವಿಮಾನ ನಿಲ್ದಾಣ ಯೋಜನೆ ಡಿಪಿಆರ್ ಸಿದ್ಧ ಆಗಿ ಸಂಪುಟದ ಒಪ್ಪಿಗೆ ದೊರೆಯಬಹುದು ಎಂದು ಕೆಎಸ್ಐಐಡಿಸಿ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>