ಇದಕ್ಕೆ ಪ್ರತಿಕ್ರಿಯಿಸಿದ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ, ‘ಈ ಸಂಬಂಧ ಈಗಾಗಲೇ ಉಗಾರ್ ಶುಗರ್ಸ್ ಮತ್ತು ಅಥಣಿ ಶುಗರ್ಸ್ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸರಿಯಾಗಿ ಕಣ್ಣಿಟ್ಟು, ತಪಾಸಣೆ ಮಾಡದಿರುವುದೇ ಅಂತರ್ಜಲ ಕಲುಷಿತವಾಗಲು ಮುಖ್ಯ ಕಾರಣ’ ಎಂದರು.