‘ಕೋವಿಡ್–19 ಸಮರ ಸೇನಾನಿಗಳ ಮೇಲೆ ದಾಳಿ ನಡೆಸುತ್ತಿರುವುದು ಏಕೆ? ಪಾದರಾಯನಪುರದಲ್ಲಿ ಗಲಭೆ ಎಬ್ಬಿಸಿದ ಮಂದಿ ಟಿಪ್ಪುನಗರಕ್ಕೂ ಅದನ್ನು ವಿಸ್ತರಿಸಿದ್ದು ಏಕೆ? ಮುಖ್ಯಮಂತ್ರಿ ಮಾತಿಗೂ ಬೆಲೆ ಕೊಡುತ್ತಿಲ್ಲ ಏಕೆ? ಇತರ ಸಮುದಾಯಗಳಲ್ಲಿನ ಅನಕ್ಷರಸ್ಥರೂ ಹೀಗೆ ಸಹಕಾರ ನೀಡದೆ ಇದ್ದಾರೆಯೇ? ಬಡ ಕಾರ್ಮಿಕರು, ಕೂಲಿಗಳನ್ನು ಕಂಡು ತಬ್ಲೀಗ್ ಸದಸ್ಯರಿಗೆ ಮರುಕ ಉಂಟಾಗುತ್ತಿಲ್ಲವೇ?’ ಎಂದು ಪ್ರಶ್ನಿಸಿರುವ ಅವರು, ಇನ್ನು ಮುಂದೆ ಜಿಲ್ಲೆಗಳ ಗಡಿಗಳಲ್ಲಿ ಸರಿಯಾದ ಕಾವಲು ಹಾಕಿ ತಬ್ಲೀಗ್ ಸದಸ್ಯರುಕ್ವಾರಂಟೈನ್ಗೆ ಒಳಗಾಗುವಂತೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.