ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ‘ಆಪರೇಷನ್’ ಬಿಕ್ಕಟ್ಟು ಬಿಗಡಾಯಿಸಿದ ನಂತರ ಪ್ರಮುಖ ನಾಯಕರು ಮತ್ತು ಬಿಜೆಪಿ–ಕಾಂಗ್ರೆಸ್ ರಾಜ್ಯ ಘಟಕಗಳ ನಡುವೆ ಟ್ವಿಟರ್ ವಾರ್ ಸಹ ಆರಂಭವಾಗಿದೆ.
‘ಸಾಫ್ ನಿಯತ್, ಸಹಿ ವಿಕಾಸ್’ (ಸ್ವಚ್ಛ ಉದ್ದೇಶ, ಸಮರ್ಪಕ ಅಭಿವೃದ್ಧಿ) ಎನ್ನುವುದುಬಿಜೆಪಿಯ ಚುನಾವಣಾ ಘೋಷವಾಕ್ಯ. ಈ ಘೋಷವಾಕ್ಯವನ್ನೇ ಉಲ್ಲೇಖಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
‘ಮಿ.ಸಾಫ್ ನಿಯತ್ನರೇಂದ್ರ ಮೋದಿ ಅವರೇ, ಕರ್ನಾಟಕದ ನಿಮ್ಮ ನಾಚಿಕೆಗೆಟ್ಟ ಬಿಜೆಪಿ ನಾಯಕರಿಗೆಒಂದು ಸರ್ಕಾರವನ್ನು ಬೀಳಿಸಲು ಅವಕಾಶ ಕೊಡುವುದು ಪ್ರಜಾಪ್ರಭುತ್ವದಲ್ಲಿ ಸ್ವಚ್ಛ ಉದ್ದೇಶ ಎನಿಸಿಕೊಳ್ಳುತ್ತದೆಯೇ? ಕೇವಲ ಜಾಹೀರಾತು ಘೋಷವಾಕ್ಯಗಳು ನಿಮ್ಮ ನಿಜವಾದ ‘ಉದ್ದೇಶ’ವನ್ನು ಮರೆಮಾಚಲಾರವು. ನಿಜವಾದ ಅಭಿವೃದ್ಧಿ ರೆಸಾರ್ಟ್ಗಳಿಂದ ಆಚೆಗೆ ಬರಬೇಕು. ಮೊದಲು ನಿಮ್ಮ ನಿಯತ್ತನ್ನು ಜನರಿಗೆ ತೋರಿಸಿ!!’ ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.
Mr. Saaf Niyat @narendramodi,
— Siddaramaiah (@siddaramaiah) January 15, 2019
Is allowing your disgraceful @BJP4Karnataka leaders to destabilize govt a 'Saaf Niyat' towards democracy?
Your PR slogans does not hide your actual 'Niyat' & your 'Sahi Vikas' should go beyond developing Resorts.
First show your Niyat to people!!
ಸಿದ್ದರಾಮಯ್ಯ: 'ಚೌಕಿದಾರ್' ಪ್ರಧಾನಿ @narendramodi ಅವರೇ, ನಿಮ್ಮನ್ನು ದೇಶದ ಚೌಕಿದಾರ್ ಎಂದು ಹೇಳಿಕೊಳ್ತೀರಿ. ಈಗ ನಮ್ಮ ರಾಜ್ಯದ ಶಾಸಕರನ್ನು ಹೋಟೆಲ್ ಕೋಣೆಗಳಲ್ಲಿ ಕೂಡಿ ಹಾಕಿ ಕಾಯುತ್ತಿರುವ ಚೌಕಿದಾರ್ ಆಗಿಬಿಟ್ಟಿರಲ್ಲಾ... ಛೆ...
'ಚೌಕಿದಾರ್' ಪ್ರಧಾನಿ @narendramodi ಅವರೇ, ನಿಮ್ಮನ್ನು ದೇಶದ ಚೌಕಿದಾರ್ ಎಂದು ಹೇಳಿಕೊಳ್ತೀರಿ.
— Siddaramaiah (@siddaramaiah) January 15, 2019
ಈಗ ನಮ್ಮ ರಾಜ್ಯದ ಶಾಸಕರನ್ನು ಹೊಟೇಲ್ ಕೋಣೆಗಳಲ್ಲಿ ಕೂಡಿ ಹಾಕಿ ಕಾಯುತ್ತಿರುವ ಚೌಕಿದಾರ್ ಆಗಿಬಿಟ್ಟಿರಲ್ಲಾ...
ಛೆ...@INCKarnataka
‘ಜನಪರ, ಅಭಿವೃದ್ಧಿಪರ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯ ಸತತ ಪ್ರಯತ್ನ ಯಶಸ್ವಿಯಾಗದು’ ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಟ್ವಿಟ್ ಮಾಡಿದೆ. ‘ಇದು ಕೋಮುವಾದದ/ಭ್ರಷ್ಟಾಚಾರದ ವಿರುದ್ಧ ಸೈದ್ಧಾಂತಿಕ ವಿಚಾರಗಳ ಮೇಲೆ ರಚನೆಯಾದ ಸಂವಿಧಾನಬದ್ದ ಮೈತ್ರಿ ಸರ್ಕಾರ’ ಎಂದು ಕಾಂಗ್ರೆಸ್ ಹೇಳಿದೆ.
ಜನಪರ, ಅಭಿವೃದ್ಧಿಪರ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯ ಸತತ ಪ್ರಯತ್ನ ಯಶಸ್ವಿಯಾಗದು.
— Karnataka Congress (@INCKarnataka) January 14, 2019
ಇದು ಕೋಮುವಾದದ/ಭ್ರಷ್ಟಚಾರದ ವಿರುದ್ಧ ಸೈದ್ಧಾಂತಿಕ ವಿಚಾರಗಳ ಮೇಲೆ ರಚೆನೆಯಾದ #ಸಂವಿಧಾನಬದ್ದ_ಮೈತ್ರಿ_ಸರ್ಕಾರ
ಸಂವಿಧಾನ/ಪ್ರಜಾಪ್ರಭುತ್ವ ವಿರೋಧಿ, #ನಾಗಪುರಬದ್ದ_ಮೋದಿ_ಶಾ_ಜೋಡಿ ರಾಜ್ಯದಲ್ಲಿ ಸರ್ಕಾರ ರಚಿಸುವ ಪ್ರಯತ್ನ ಅಧಿಕಾರದಾಹದ ಪರಾಕಾಷ್ಟೆ!
ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಕರ್ನಾಟಕ ಘಟಕ, ಕುಮಾರಸ್ವಾಮಿ ಅವರ ದಿನಚರಿಯನ್ನು ಟ್ವಿಟ್ ಮಾಡಿದೆ.
‘ನೀವು ಬೆಳಿಗ್ಗೆ ಸುಳ್ಳು ಭರವಸೆಗಳನ್ನು ನೀಡಿ ಪ್ರಚಾರ ಪಡೆಯುತ್ತಾ ಉಪಹಾರವನ್ನು ಆಸ್ವಾದಿಸುತ್ತೀರಿ. ಮಧ್ಯಾಹ್ನ ಆಪರೇಷನ್ ಕಮಲದ ಜಪ ಮಾಡುತ್ತಾ ಸರ್ಕಾರ ನಡೆಸುವಲ್ಲಿ ನೀವು ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಲು ಯತ್ನಿಸುತ್ತೀರಿ. ರಾತ್ರಿ ನಿಮ್ಮನಿಮ್ಮೊಳಗೆ ಅಧಿಕಾರಕ್ಕಾಗಿ ಕಿತ್ತಾಡುತ್ತೀರಿ’ ಎಂದು ತಿರುಗೇಟು ಕೊಟ್ಟಿದೆ.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದನ್ನು ರಿಟ್ವಿಟ್ ಮಾಡಿದ್ದಾರೆ.
Daily activity of @hd_kumaraswamy government
— BJP Karnataka (@BJP4Karnataka) January 14, 2019
Morning : Make fake promises in media get full coverage & enjoy breakfast
Afternoon : Cry operation Kamala, hide failure to run govt by blaming BJP
Night : Fight among themselves for power & go to sleep
Next day : repeat..
ಜನರಿಗೆ ಟ್ವಿಟರ್ನಲ್ಲಿ ಸಂಕ್ರಾಂತಿ ಶುಭಾಶಯ ಹೇಳಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ‘ರೈತ ಪರ ಸರ್ಕಾರವನ್ನು ಕದಡಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳ ಊರುಭಂಗವಾಗಲಿದೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಸಮಸ್ತರಿಗೂ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಈ ಸಂದರ್ಭದಲ್ಲಿ ರೈತ ಪರ ಸರ್ಕಾರವನ್ನು ಕದಡಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳ ಊರುಭಂಗವಾಗಲಿದ್ದು ಈ ಪರ್ವ ಅನ್ನದಾತ ರೈತರು ಹಾಗೂ ಸಮಸ್ತ ಜನತೆಯ ಮನ-ಮನೆಗಳಲ್ಲಿ ಸುಖ, ಶಾಂತಿ, ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ.#MakaraSankranthi
— H D Devegowda (@H_D_Devegowda) January 15, 2019
ಬಿಜೆಪಿ ಕರ್ನಾಟಕ ಘಟಕ: ‘ನೀವು ಬೆಳಿಗ್ಗೆ ಸುಳ್ಳು ಭರವಸೆಗಳನ್ನು ನೀಡಿ ಪ್ರಚಾರ ಪಡೆಯುತ್ತಾ ಉಪಾಹಾರ ಆಸ್ವಾದಿಸುತ್ತೀರಿ. ಮಧ್ಯಾಹ್ನ ಆಪರೇಷನ್ ಕಮಲದ ಜಪ ಮಾಡುತ್ತಾ ಸರ್ಕಾರ ನಡೆಸುವಲ್ಲಿ ನೀವು ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಲು ಯತ್ನಿಸುತ್ತೀರಿ. ರಾತ್ರಿ ನಿಮ್ಮ ನಿಮ್ಮೊಳಗೆ ಅಧಿಕಾರಕ್ಕಾಗಿ ಕಿತ್ತಾಡುತ್ತೀರಿ’ ಎಂದು , ಕುಮಾರಸ್ವಾಮಿ ಅವರಿಗೆ ತಿರುಗೇಟು ಕೊಟ್ಟಿದೆ.
ಶೋಭಾ ಕರಂದ್ಲಾಜೆ: ಕಾಂಗ್ರೆಸ್ನ ಆಂತರಿಕ ಕಲಹ ಈಗ ಬಯಲಿಗೆ ಬಂದಿದೆ. ಜೆಡಿಎಸ್ ನಾಯಕರು ಒಂದು ವಿಷಯವನ್ನು ಯಾವತ್ತೂ ಮರೆಯಬಾರದು. ಕುಮಾರಸ್ವಾಮಿ ಅವರು 2010ರಲ್ಲಿ 16 ಶಾಸಕರನ್ನು ಗೋವಾಕ್ಕೆ ಕರೆದುಕೊಂಡು ಹೋಗಿ ರೈತಸ್ನೇಹಿ ಬಿ.ಎಸ್.ಯಡಿಯೂರಪ್ಪ ಸರ್ಕಾರವನ್ನು ಅತಂತ್ರಗೊಳಿಸಲು ಯತ್ನಿಸಲಿಲ್ಲವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.