ಬೆಂಗಳೂರು: ಚಾಮರಾಜನಗರದಿಂದ ಮಾಜಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹಾಗೂ ಬಳ್ಳಾರಿಯಿಂದ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಸಂಬಂಧಿ ದೇವೇಂದ್ರಪ್ಪ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ತಯಾರಿ ನಡೆಸಿದೆ.
ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಆರ್.ಧ್ರುವನಾರಾಯಣ್ ಎರಡು ಸಲ ಗೆದ್ದಿದ್ದಾರೆ. ಈ ಸಲ ಅವರಿಗೆ ಪ್ರಬಲ ಪ್ರತಿಸ್ಪರ್ಧೆ ನೀಡಬೇಕಾದರೆ ಮಾಜಿ ಸಚಿವ ಹಾಗೂ ಸಂಸದ ಶ್ರೀನಿವಾಸ ಪ್ರಸಾದ್ ಅವರೇ ಕಣಕ್ಕೆ ಇಳಿಯಬೇಕು ಎಂಬುದು ಜಿಲ್ಲಾ ಘಟಕದ ನಾಯಕರ ಅಭಿಮತ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಿ.ಪಿ.ಯೋಗೀಶ್ವರ ಕಣಕ್ಕೆ ಇಳಿಸುವುದು ನಾಯಕರ ಆಲೋಚನೆ. ಚುನಾವಣಾ ವೆಚ್ಚ ನೋಡಿಕೊಂಡರೆ ಸ್ಪರ್ಧೆಗೆ ಸಿದ್ಧ ಎಂದು ಯೋಗೀಶ್ವರ ಹೇಳಿದ್ದಾರೆ.