<p><strong>ಬೆಂಗಳೂರು:</strong>ರಾಜ್ಯದ ರಕ್ತ ನಿಧಿಗಳಲ್ಲಿ ರಕ್ತ ಸಂಗ್ರಹ ಮತ್ತು ವಿತರಣೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ'ರಕ್ತ ಸಂಗ್ರಹ ಮತ್ತು ವಿತರಣಾ ವಾಹನ’ಗಳಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಸೋಮವಾರ ಚಾಲನೆ ನೀಡಿದರು.</p>.<p>‘ರಕ್ತ ಸಂಗ್ರಹ ಮತ್ತು ವಿತರಣೆಯಲ್ಲಿ ಈ ವಾಹನಗಳು ಮಹತ್ವದ ಪಾತ್ರ ನಿರ್ವಹಿಸಲಿವೆ. ಆದರೆ, ಇವುಗಳ ವಿನ್ಯಾಸ ಅಷ್ಟೊಂದು ಸಮಂಜಸವಾಗಿಲ್ಲ’ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.</p>.<p>‘ಒಂದು ಬಾರಿಗೆ ಇಬ್ಬರಿಗಿಂತ ಹೆಚ್ಚು ಜನ ರಕ್ತದಾನ ಮಾಡುವ ನಿಟ್ಟಿನಲ್ಲಿ ಹಾಸಿಗೆಯ ಸಂಖ್ಯೆ ಹೆಚ್ಚಿಸಬೇಕು’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ ಅವರು, ‘ಸದ್ಯ ಐದು ವಾಹನಗಳು ಕಾರ್ಯಾರಂಭಿಸಲಿವೆ. ಈ ವಾಹನಗಳ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ’ ಎಂದರು.</p>.<p>ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ (ಎನ್ಎಚ್ಎಂ) ಆರೋಗ್ಯ ಇಲಾಖೆಯು ಈ ವಾಹನಗಳನ್ನು ಖರೀದಿಸಿದೆ.</p>.<p class="Subhead">5 ಜಿಲ್ಲೆಗಳಲ್ಲಿ ಕಾರ್ಯ: ಸದ್ಯ ಈ ವಾಹನಗಳು ದಾವಣಗೆರೆ, ತುಮಕೂರು, ಶಿವಮೊಗ್ಗ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿವೆ.</p>.<p><strong>ವಾಹನದಲ್ಲಿ ಏನೇನಿದೆ ?</strong></p>.<p>ರಕ್ತದಾನ ಮಾಡಲು ಮತ್ತು ವಿಶ್ರಾಂತಿಗಾಗಿ ಎರಡು ಹಾಸಿಗೆ. ರೆಫ್ರಿಜರೇಟರ್, ಕವರ್ ಸೀಲ್ ಯಂತ್ರ, ರಕ್ತ ಪರೀಕ್ಷೆ ಕಿಟ್, ವೈದ್ಯಕೀಯ ಉಪಕರಣ, ಜನರೇಟರ್ ಮತ್ತು ಹವಾನಿಯಂತ್ರಿತ ವ್ಯವಸ್ಥೆ</p>.<p><strong>ಸಿಬ್ಬಂದಿ ಎಷ್ಟು ?</strong></p>.<p>ಒಂದು ವಾಹನದಲ್ಲಿವೈದ್ಯ, ಸಲಹೆಗಾರ, ಇಬ್ಬರು ಶುಶ್ರೂಷಕರು, ಇಬ್ಬರು ಡಿ ದರ್ಜೆಯ ಸಿಬ್ಬಂದಿ ಹಾಗೂ ಚಾಲಕ ಇರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ರಾಜ್ಯದ ರಕ್ತ ನಿಧಿಗಳಲ್ಲಿ ರಕ್ತ ಸಂಗ್ರಹ ಮತ್ತು ವಿತರಣೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ'ರಕ್ತ ಸಂಗ್ರಹ ಮತ್ತು ವಿತರಣಾ ವಾಹನ’ಗಳಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಸೋಮವಾರ ಚಾಲನೆ ನೀಡಿದರು.</p>.<p>‘ರಕ್ತ ಸಂಗ್ರಹ ಮತ್ತು ವಿತರಣೆಯಲ್ಲಿ ಈ ವಾಹನಗಳು ಮಹತ್ವದ ಪಾತ್ರ ನಿರ್ವಹಿಸಲಿವೆ. ಆದರೆ, ಇವುಗಳ ವಿನ್ಯಾಸ ಅಷ್ಟೊಂದು ಸಮಂಜಸವಾಗಿಲ್ಲ’ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.</p>.<p>‘ಒಂದು ಬಾರಿಗೆ ಇಬ್ಬರಿಗಿಂತ ಹೆಚ್ಚು ಜನ ರಕ್ತದಾನ ಮಾಡುವ ನಿಟ್ಟಿನಲ್ಲಿ ಹಾಸಿಗೆಯ ಸಂಖ್ಯೆ ಹೆಚ್ಚಿಸಬೇಕು’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ ಅವರು, ‘ಸದ್ಯ ಐದು ವಾಹನಗಳು ಕಾರ್ಯಾರಂಭಿಸಲಿವೆ. ಈ ವಾಹನಗಳ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ’ ಎಂದರು.</p>.<p>ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ (ಎನ್ಎಚ್ಎಂ) ಆರೋಗ್ಯ ಇಲಾಖೆಯು ಈ ವಾಹನಗಳನ್ನು ಖರೀದಿಸಿದೆ.</p>.<p class="Subhead">5 ಜಿಲ್ಲೆಗಳಲ್ಲಿ ಕಾರ್ಯ: ಸದ್ಯ ಈ ವಾಹನಗಳು ದಾವಣಗೆರೆ, ತುಮಕೂರು, ಶಿವಮೊಗ್ಗ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿವೆ.</p>.<p><strong>ವಾಹನದಲ್ಲಿ ಏನೇನಿದೆ ?</strong></p>.<p>ರಕ್ತದಾನ ಮಾಡಲು ಮತ್ತು ವಿಶ್ರಾಂತಿಗಾಗಿ ಎರಡು ಹಾಸಿಗೆ. ರೆಫ್ರಿಜರೇಟರ್, ಕವರ್ ಸೀಲ್ ಯಂತ್ರ, ರಕ್ತ ಪರೀಕ್ಷೆ ಕಿಟ್, ವೈದ್ಯಕೀಯ ಉಪಕರಣ, ಜನರೇಟರ್ ಮತ್ತು ಹವಾನಿಯಂತ್ರಿತ ವ್ಯವಸ್ಥೆ</p>.<p><strong>ಸಿಬ್ಬಂದಿ ಎಷ್ಟು ?</strong></p>.<p>ಒಂದು ವಾಹನದಲ್ಲಿವೈದ್ಯ, ಸಲಹೆಗಾರ, ಇಬ್ಬರು ಶುಶ್ರೂಷಕರು, ಇಬ್ಬರು ಡಿ ದರ್ಜೆಯ ಸಿಬ್ಬಂದಿ ಹಾಗೂ ಚಾಲಕ ಇರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>