ಕೊಪ್ಪಳ: ಜೈನ ಸಮಾಜದ ನಾಲ್ವರು ಬಾಲಕರು ಸೋಮವಾರ ಸನ್ಯಾಸ ಸ್ವೀಕರಿಸಿದರು. ಅವರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.
ನಗರದವರ್ತಕ ಘೇಸುಲಾಲ್ ಮೆಹತಾ ಅವರ ಮೊಮ್ಮಗ ವರ್ಧಮಾನ್ ಮೆಹೆಂದರ್ ಮೆಹತಾ (16), ವರ್ಧಮಾನ್ ಅವರ ಸೋದರ ಮಾವನ ಮಕ್ಕಳಾದದಾವಣಗೆರೆಜಿಲ್ಲೆಯ ಚಳ್ಳಕೆರೆಯ ಬಾಗರೇಚಾ ಕುಟುಂಬದ ರಾಯನ್ ಬಾಗರೇಚಾ (10), ಪ್ರತೀಕ್ ಬಾಗರೇಚಾ (14),ಭಾವಿಕ್ ಬಾಗರೇಚಾ (16)ಸನ್ಯಾಸ ಸ್ವೀಕರಿಸಿದರು.
ವರ್ಧಮಾನ್ ನಗರದ ಎಸ್ಎಫ್ಎಸ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಓದುತ್ತಿದ್ದಾರೆ. ಡಿ.14ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೈನ ಮುನಿಗಳಿಂದ ಇವರೆಲ್ಲರೂ ದೀಕ್ಷೆ ಸ್ವೀಕರಿಸಲಿದ್ದಾರೆಎಂದು ಕುಟುಂಬದವರು ತಿಳಿಸಿದರು.