ತುಮಕೂರು ಮತ್ತು ಕುಣಿಗಲ್ ಜನಸಂಕಲ್ಪ ಯಾತ್ರೆಗಳಲ್ಲಿ ಯಡಿಯೂರಪ್ಪ ಭಾಗವಹಿಸಿಲ್ಲ. ಈ ಎರಡೂ ಕಾರ್ಯಕ್ರಮಗಳಿಗೆ ಸರಿಯಾದ ರೀತಿಯಲ್ಲಿ ಆಮಂತ್ರಣ ನೀಡದ ಕಾರಣ ಬೇಸರಗೊಂಡು ಯಡಿಯೂರಪ್ಪ ಅವರು ಭಾಗವಹಿಸಿಲ್ಲ.ಅವರನ್ನು ಆಹ್ವಾನಿಸಬೇಕಾಗುತ್ತದೆ ಎಂಬ ಕಾರಣಕ್ಕೇ, ಚಾಮರಾಜನಗರದ ಪಕ್ಷದ ಕಾರ್ಯಕ್ರಮವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಪರಿವರ್ತಿಸಲಾಯಿತು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದಿವೆ.