ಕಾರವಾರ/ಖಾನಾಪುರ: ಛತ್ತೀಸ್ಗಡದ ಕಂಕೇರ್ ಜಿಲ್ಲೆಯ ಛೋಟೆ ಬೇಟಿಯಾ ಪ್ರದೇಶದಲ್ಲಿ ನಕ್ಸಲರು ಹೂತಿಟ್ಟಿದ್ದ ಸ್ಫೋಟಕ ಸಿಡಿದು ಮೃತಪಟ್ಟಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧ ವಿಜಯಾನಂದ ಸುರೇಶ ನಾಯ್ಕ (29) ಅವರ ಪಾರ್ಥಿವ ಶರೀರವನ್ನು ಕಾರವಾರಕ್ಕೆ ತರಲಾಗಿದೆ.
ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಶಾಸಕಿ ರೂಪಾಲಿ ನಾಯ್ಕ ಪುಷ್ಪಗುಚ್ಛವಿಟ್ಟು ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಯೋಧನ ಮನೆಯಿರುವ ಕೋಮಾರಪಂಥ ವಾಡಾದವರೆಗೆ ಮೆರವಣಿಗೆಯಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತದೆ.