ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆಗೆ ಹಣ ಆರೋಪ: ತನಿಖೆಗೆ ಸೂಚಿಸಿದ್ದೇನೆ ಎಂದ ಗೃಹ ಸಚಿವ ಜಿ. ಪರಮೇಶ್ವರ

Published 28 ನವೆಂಬರ್ 2023, 21:56 IST
Last Updated 28 ನವೆಂಬರ್ 2023, 21:56 IST
ಅಕ್ಷರ ಗಾತ್ರ

ಬೆಂಗಳೂರು: ‘ವರ್ಗಾವಣೆಗಾಗಿ ಗೃಹ ಸಚಿವರಿಗೆ ಹಣ ತಲುಪಿಸಲಾಗಿದೆ ಎಂದು ಉಮಾಪತಿ ಗೌಡ ಅವರು ಮಾತನಾಡಿರುವ ಆಡಿಯೊವನ್ನು ನಾನೂ ಆಲಿಸಿದ್ದೇನೆ. ಅದರ ಬಗ್ಗೆ ತನಿಖೆ ಮಾಡುವಂತೆ ಪೊಲೀಸ್‌ ಆಯುಕ್ತರಿಗೆ ಸೂಚನೆ ನೀಡಿದ್ದೇನೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. 

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ನೇರವಾಗಿ ಗೃಹ ಸಚಿವರಿಗೆ ಕೊಟ್ಟಿದ್ದೇನೆ ಎಂದೂ ಆಡಿಯೊದಲ್ಲಿ ಹೇಳಿದ್ದಾನೆ. ಆ ಗೃಹ ಸಚಿವ ನಾನೇ ತಾನೇ. ಯಾವ ಉದ್ದೇಶದಿಂದ ಹಣ ಕೊಟ್ಟಿದ್ದಾನೆ? ಯಾವಾಗ ಕೊಟ್ಟಿದ್ದಾನೆ? ಎಷ್ಟು ಕೊಟ್ಟಿದ್ದಾನೆ? ಎಂದು ತನಿಖೆ ಮಾಡಿ ಎಂದು ಹೇಳಿದ್ದೇನೆ’ ಎಂದರು.

‘ನಿಗಮ ಮಂಡಳಿಗಳಿಗೆ ನೇಮಕ ವಿಚಾರದಲ್ಲಿ ಪಕ್ಷದ ರಾಜ್ಯ ಉಸ್ತುವಾರಿಯವರು ಕಳೆದ ವಾರ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತನಾಡಿದ್ದಾರೆ. ಅವರು ನೇಮಕ ಪ್ರಕ್ರಿಯೆ ಅಂತಿಮಗೊಳಿಸಬಹುದು. ನನ್ನ ಜೊತೆ ಈ ಬಗ್ಗೆ ಚರ್ಚೆ ಮಾಡಿಲ್ಲ. ನನ್ನ ಅಭಿಪ್ರಾಯವನ್ನೂ ಕೇಳಿದರೆ ಒಳ್ಳೆಯದಿತ್ತು. ಯಾಕೆಂದರೆ, ನಾನು ಎಂಟು ವರ್ಷ ಅಧ್ಯಕ್ಷನಾಗಿದ್ದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT