ತಮಿಳುನಾಡಿಗೆ ನವೆಂಬರ್ 15ರವರೆಗೆ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿತ್ತು. ಪ್ರಾಧಿಕಾರದ ಸಭೆಯ ಆರಂಭದಲ್ಲೇ ಕರ್ನಾಟಕದ ಅಧಿಕಾರಿಗಳು, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಒಳಹರಿವು ಶೂನ್ಯವಾಗಿದೆ. ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ತಮಿಳುನಾಡಿನ ಅಧಿಕಾರಿಗಳು, ‘ಕರ್ನಾಟಕ ಸರ್ಕಾರವು ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದೆ. ಸಂಕಷ್ಟದ ಸೂತ್ರದಡಿ 15 ಟಿಎಂಸಿ ಅಡಿಯಷ್ಟು ಹಿಂಬಾಕಿ ನೀರು ಸಹ ಹರಿಸಬೇಕು. ಪ್ರತಿದಿನ 13 ಸಾವಿರ ಕ್ಯೂಸೆಕ್ ಹರಿಸಲು ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದರು.