ಬೆಂಗಳೂರು: ಸಿಗರೇಟ್ ವಿತರಕರಿಂದ ಲಂಚ ಪಡೆದ ಗುಟ್ಟು ಎಸಿಪಿ ಮತ್ತು ಇನ್ಸ್ಪೆಕ್ಟರ್ಗಳ ಮಧ್ಯೆ ಹಣದ ಹಂಚಿಕೆ ಕಿತ್ತಾಟದಿಂದ ರಟ್ಟಾಯಿತು. ಎಂ.ಡಿ.ಸನ್ಸ್, ಸಿಗರೇಟ್ ಪೂರೈಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಪ್ರಭುಶಂಕರ್ಗೆ ₹ 62.5 ಲಕ್ಷ ನೀಡಿದ್ದು ಇನ್ಸ್ಪೆಕ್ಟರ್ಗಳಿಗೆ ಗೊತ್ತಾಯಿತು. ಆದರೂ ಅವರು ವಿತರಕರ ಗೋದಾಮಿನ ಮೇಲೆ ದಾಳಿ ನಡೆಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.