‘ರಾಜ್ಯದಲ್ಲಿ ಸುಮಾರು 17.5 ಲಕ್ಷಹೆಕ್ಟೇರ್ ಗೋಮಾಳ ಭೂಮಿಯಿದೆ. ಇದನ್ನು ಗೋಮಾಳ, ಕಾವಲ್, ಬೆಟ್ಟ, ಸೊಪ್ಪಿನ ಬೆಟ್ಟ ಇತ್ಯಾದಿ ಹೆಸರುಗಳಿಂದ ಸರ್ಕಾರಿ ದಾಖಲೆಯಲ್ಲಿ ಗುರುತಿಸಲಾಗಿದೆ. ಇದೂ ಸೇರಿದಂತೆ ರಾಜ್ಯದಲ್ಲಿ ಒಟ್ಟು 25 ಲಕ್ಷ ಹೆಕ್ಟರ್ ಸರ್ಕಾರಿ ಕಂದಾಯ ಜಮೀನಿದೆ. ಇದು ಅತ್ಯಂತ ಮಹತ್ವದ ಸಾಮೂಹಿಕ ಭೂಮಿಯಾಗಿದೆ. ಈ ಭೂಮಿಯನ್ನು ಉದ್ಯಮಿಗಳು ಹಾಗೂ ಸಂಘ–ಸಂಸ್ಥೆಗಳಿಗೆವಿತರಿಸುವ ಬಗ್ಗೆ ಸರ್ಕಾರ ಸಂಪುಟಉಪ ಸಮಿತಿ ರಚಿಸಿದೆ. ಈ ಕ್ರಮವು ಗೋಮಾಳ ಭೂಮಿಗಳ ನಾಶಕ್ಕೆ ಕಾರಣವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.