ಎಸ್.ಆರ್.ಪಾಟೀಲ ಅವರಿಂದ ತೆರವಾಗುವ ಸ್ಥಾನಕ್ಕೆ ಹೊಸಬರನ್ನು ಕಾಂಗ್ರೆಸ್ ನೇಮಕ ಮಾಡಬೇಕಿದೆ. ಪಾಟೀಲ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿಲ್ಲ. ಅವರ ಅವಧಿ ಜ.5 ಕ್ಕೆ ಕೊನೆ ಆಗಲಿದೆ. ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್, ಆರ್.ಬಿ. ತಿಮ್ಮಾಪೂರ, ನಜೀರ್ ಅಹ್ಮದ್, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಹೀಗೆ ಹಲವು ಹೆಸರುಗಳು ಕೇಳಿಬರುತ್ತಿವೆ.