ರಾಜಣ್ಣ ಅವರಿಗೆ ಕರೆ ಮಾಡಿದ ವರಿಷ್ಠರು, ‘ನಿಮಗೆ ಚುನಾವಣೆಯಲ್ಲಿ ಟಿಕೆಟ್ ಪಡೆಯಲು, ಗೆಲ್ಲಲು, ಬಳಿಕ ಮಂತ್ರಿ ಮಾಡಲು ಹೈಕಮಾಂಡ್ ಬೇಕಾಗಿತ್ತಲ್ಲವೇ? ನಿಮಗೆ ತೋಚಿದಂತೆ ಮಾತನಾಡುತ್ತಿರುವುದರಿಂದ ನಿಮಗಲ್ಲ, ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ. ಇದೇ ಮೊದಲು, ಇದೇ ಕೊನೆ. ಇದೇ ರೀತಿ ಮಾತನಾಡಿದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ತಾಕೀತು ಮಾಡಿದ್ದಾರೆ ಎಂದು ಗೊತ್ತಾಗಿದೆ.