ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ‘ಹಣ ಇಡದ ಕಾರಣ ಯೋಜನೆ ಅನುಷ್ಠಾನಕ್ಕೆ ಸಮಸ್ಯೆ ಆಯಿತು ಎಂದು ಕುಮಾರಸ್ವಾಮಿ ಮೊನ್ನೆ ಹೇಳಿಕೊಂಡರು. ಸರ್ಕಾರ ಯಾವುದಾದರೂ ಹೊಸ ಘೋಷಣೆ ಮಾಡಿದರೆ ಅದನ್ನು ಮುಂದುವರಿಸುವುದು ಮುಂದಿನ ಸರ್ಕಾರದ ಜವಾಬ್ದಾರಿ. ಒಂದು ವೇಳೆ ಅನುದಾನ ಕೊರತೆ ಉಂಟಾದರೆ ಪೂರಕ ಬಜೆಟ್ನಲ್ಲಿ ಅದಕ್ಕೆ ವ್ಯವಸ್ಥೆ ಮಾಡಬೇಕು’ ಎಂದರು.