‘ಚುನಾವಣೆಯ ಸಮಯದಲ್ಲಿ ಮೋದಿ ತಿಂಗಳುಗಟ್ಟಲೆ ಕರ್ನಾಟಕದಲ್ಲಿ ಠಿಕಾಣಿ ಹೂಡಿದ್ದರೂ, ಹತ್ತಾರು ಕಿಲೋಮೀಟರ್ ರೋಡ್ ಶೋಕಿ ಮಾಡಿದರೂ ಮೋದಿ ಮುಖಕ್ಕೆ ಕನ್ನಡಿಗರು ಕಿಂಚಿತ್ ಬೆಲೆ ಕೊಡಲಿಲ್ಲ. ಮೋದಿ ಮುಖ ಎಂಬುದು ಈಗ ಚಲಾವಣೆಗೆ ಸಾಧ್ಯವಿಲ್ಲದ ಸವಕಲು ನಾಣ್ಯದಂತಾಗಿದೆ ಎಂಬ ಸತ್ಯ ಬಿಜೆಪಿಗರಿಗೆ ಅರ್ಥವಾದಂತಿದೆ ಎಂದು ಹೇಳಿದೆ.
ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುವ ಮುಖ್ಯ ಸೂತ್ರದಾರರು ಮೋದಿ, ಶಾ ಜೋಡಿಯೇ ಎನ್ನುವುದು ರೇಣುಕಾಚಾರ್ಯರಿಂದ ಬಯಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಬಿ.ಎಸ್ ಯಡಿಯೂರಪ್ಪ ವಿರುದ್ಧ ಸಂತೋಷ ಕೂಟಕ್ಕೆ ಬಲ ಕೊಡಲೆಂದೇ ನಳಿನ್ ಕುಮಾರ್ ರನ್ನು ಅಧ್ಯಕ್ಷರಾನ್ನಾಗಿ ಮಾಡಲಾಯ್ತೆ ಎಂದು ಬಿಜೆಪಿ ರಾಜ್ಯ ಘಟಕವನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿರುವ ಕಾಂಗ್ರೆಸ್, ನಳಿನ್ ಕುಮಾರ್ ಕಟೀಲ್ ಅವರೇ,ನೀವು ಯಾರ ರಬ್ಬರ್ ಸ್ಟಾಂಪ್? ರಾಜ್ಯ ಬಿಜೆಪಿಯ ಹಿಡನ್ ಅಧ್ಯಕ್ಷ ಯಾರು? ರಾಜ್ಯಾಧ್ಯಕ್ಷ ಹುದ್ದೆ ಕೇವಲ ಕುರ್ಚಿ ತುಂಬಲು ಇರುವ ಹುದ್ದೆ ಮಾತ್ರವೇ ಎಂದು ಪ್ರಶ್ನಿಸಿದೆ.