<p><strong>ಬೆಂಗಳೂರು</strong>: ಲಾಕ್ಡೌನ್ ಸಡಿಲಿಸಿದರೂ ಹುಟ್ಟು ಹಬ್ಬ, ಕಿಟ್ಟಿ ಪಾರ್ಟಿ ಸೇರಿದಂತೆ ವಿವಿಧ ಸಂತೋಷ ಕೂಟಗಳಿಗೆ ಅವಕಾಶಗಳಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.</p>.<p>ಕೋವಿಡ್ ಪ್ರಕಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದ್ದು, ನಿವಾಸಿ ಕಲ್ಯಾಣ ಸಂಘಟನೆಗಳು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಬಿಡುಗಡೆ ಮಾಡಿದ್ದಾರೆ. ಯಾವುದೇ ಅಪರಿಚಿತ ವ್ಯಕ್ತಿ ಹಾಗೂ ಅಥಿತಿ ಪ್ರವೇಶಿಸಿದಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಅವರನ್ನು ಸ್ಕ್ರೀನಿಂಗ್ ಮಾಡಬೇಕು.</p>.<p>ವ್ಯಕ್ತಿಯು ಶೀತ, ಜ್ವರ, ಕೆಮ್ಮು ಸೇರಿದಂತೆ ಕೊರೊನಾ ಸೋಂಕಿನ ಲಕ್ಷಣವನ್ನು ಹೊಂದಿದ್ದಲ್ಲಿ ಆರೋಗ್ಯ ತಪಾಸಣೆಗೆ ಫಿವರ್ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಕೂಡಲೇ ಕಳುಹಿಸಬೇಕು. ಎಲ್ಲ ಸಮಯದಲ್ಲೂ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಿಗಾ ಇಡಲು ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಅಳವಡಿಸಬೇಕು. ಪ್ರತಿಯೊಬ್ಬ ನಿವಾಸಿಯೂ ಮನೆಯಿಂದ ಹೊರಗಡೆ ಬರುವಾಗ ಮುಖಗವಸನ್ನು ಧರಿಸಿರಬೇಕು ಎಂದು ತಿಳಿಸಲಾಗಿದೆ.</p>.<p>ಕಟ್ಟಡಗಳಿಗೆ ಪ್ರವೇಶಿಸುವ ಹಾಗೂ ತೆರಳುವ ಪ್ರವೇಶ ದ್ವಾರದಲ್ಲಿ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಲು ಸ್ಯಾನಿಟೈಸರ್ಗಳನ್ನು ಇಟ್ಟಿರಬೇಕು. ಲಿಫ್ಟ್ ಸೇರಿದಂತೆ ಸಾಮಾನ್ಯ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವ ಜತೆಗೆ ಸೋಂಕು ನಿವಾರಕದಿಂದ ಪ್ರತಿನಿತ್ಯ ಸ್ವಚ್ಛಗೊಳಿಸುತ್ತಿರಬೇಕು.</p>.<p>ಉದ್ಯಾನವನ, ನಡಿಗೆ ಪಥದಲ್ಲಿ ಸಾಗುವಾಗಲೂ ಅಂತರ ಕಾಯ್ಡುಕೊಳ್ಳುವುದನ್ನು ಮರೆಯಕೂಡದು. ಹೊರಾಂಗಣ ಕ್ರೀಡೆ, ಶಿಬಿರಗಳನ್ನೂ ಸದ್ಯದ ಪರಿಸ್ಥಿತಿಯಲ್ಲಿ ನಡೆಸುವ ಹಾಗಿಲ್ಲ. ಅದೇ ರೀತಿ, ಸೂಕ್ತ ಮಾರ್ಗಸೂಚಿ ಬಿಡುಗಡೆಯಾಗುವವರೆಗೂ ಸಾರ್ವಜನಿಕ ಜಿಮ್ಗಳು, ಈಜುಕೊಳವನ್ನು ಬಳಸುವ ಹಾಗಿಲ್ಲ.</p>.<p>ಮನೆ ಕ್ವಾರಂಟೈನ್ಗೆ ಒಳಗಾದವರು ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿವಾಸಿ ಕಲ್ಯಾಣ ಸಂಘಟನೆಗಳು ನೋಡಿಕೊಳ್ಳಬೇಕು. ಒಂದು ವೇಳೆ ಮನೆಯಿಂದ ಹೊರ ಬಂದಲ್ಲಿ ಕೂಡಲೇ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಲಾಗಿದೆ.</p>.<p><strong>ಆಪ್ತಮಿತ್ರ ಸಹಾಯವಾಣಿ ಸಂಖ್ಯೆ: </strong>14410</p>.<p><strong>ನಿವಾಸಿಗಳು ಅನುಸರಿಸಬೇಕಾದ ಸೂಚನೆಗಳು</strong><br />* ನೆರೆಹೊರೆಯವರ ಆರೋಗ್ಯದ ಸ್ಥಿತಿಗತಿಯ ನಿಗಾ ಇಟ್ಟಿರಿ. ಮುಂಜಾಗರೂಕ ಕ್ರಮಗಳೊಂದಿಗೆ ಎಚ್ಚರಿಕೆಯಿಂದ ಇರಿ<br />* ಕಳೆದ 14 ದಿನಗಳಲ್ಲಿ ವಿದೇಶ, ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ್ದಲ್ಲಿ ಅಥವಾ ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಲ್ಲಿ ಆರೋಗ್ಯ ಅಧಿಕಾರಿಗೆ ಮಾಹಿತಿ ನೀಡಿ<br />* ವಿದೇಶ ಅಥವಾ ಅನ್ಯ ರಾಜ್ಯಗಳಿಂದ ಬಂದಿದ್ದಲ್ಲಿ ಕಟ್ಟುನಿಟ್ಟಾಗಿ 14 ದಿನಗಳು ಮನೆಯ ಕ್ವಾರಂಟೈನ್ಗೆ ಒಳಗಾಗಿ<br />* ಯಾವುದೇ ನಿವಾಸಿ ವಿದೇಶ ಅಥವಾ ಅನ್ಯ ರಾಜ್ಯಗಳಿಂದ ಬಂದಲ್ಲಿ ಕೂಡಲೇ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ<br />* 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರು ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಿ<br />* ಮಕ್ಕಳು ಗುಂಪು ಗುಂಪಾಗಿ ಸೇರದಂತೆ ನೋಡಿಕೊಳ್ಳಿ. ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ<br />* ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಲಾಕ್ಡೌನ್ ಸಡಿಲಿಸಿದರೂ ಹುಟ್ಟು ಹಬ್ಬ, ಕಿಟ್ಟಿ ಪಾರ್ಟಿ ಸೇರಿದಂತೆ ವಿವಿಧ ಸಂತೋಷ ಕೂಟಗಳಿಗೆ ಅವಕಾಶಗಳಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.</p>.<p>ಕೋವಿಡ್ ಪ್ರಕಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದ್ದು, ನಿವಾಸಿ ಕಲ್ಯಾಣ ಸಂಘಟನೆಗಳು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಬಿಡುಗಡೆ ಮಾಡಿದ್ದಾರೆ. ಯಾವುದೇ ಅಪರಿಚಿತ ವ್ಯಕ್ತಿ ಹಾಗೂ ಅಥಿತಿ ಪ್ರವೇಶಿಸಿದಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಅವರನ್ನು ಸ್ಕ್ರೀನಿಂಗ್ ಮಾಡಬೇಕು.</p>.<p>ವ್ಯಕ್ತಿಯು ಶೀತ, ಜ್ವರ, ಕೆಮ್ಮು ಸೇರಿದಂತೆ ಕೊರೊನಾ ಸೋಂಕಿನ ಲಕ್ಷಣವನ್ನು ಹೊಂದಿದ್ದಲ್ಲಿ ಆರೋಗ್ಯ ತಪಾಸಣೆಗೆ ಫಿವರ್ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಕೂಡಲೇ ಕಳುಹಿಸಬೇಕು. ಎಲ್ಲ ಸಮಯದಲ್ಲೂ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಿಗಾ ಇಡಲು ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಅಳವಡಿಸಬೇಕು. ಪ್ರತಿಯೊಬ್ಬ ನಿವಾಸಿಯೂ ಮನೆಯಿಂದ ಹೊರಗಡೆ ಬರುವಾಗ ಮುಖಗವಸನ್ನು ಧರಿಸಿರಬೇಕು ಎಂದು ತಿಳಿಸಲಾಗಿದೆ.</p>.<p>ಕಟ್ಟಡಗಳಿಗೆ ಪ್ರವೇಶಿಸುವ ಹಾಗೂ ತೆರಳುವ ಪ್ರವೇಶ ದ್ವಾರದಲ್ಲಿ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಲು ಸ್ಯಾನಿಟೈಸರ್ಗಳನ್ನು ಇಟ್ಟಿರಬೇಕು. ಲಿಫ್ಟ್ ಸೇರಿದಂತೆ ಸಾಮಾನ್ಯ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವ ಜತೆಗೆ ಸೋಂಕು ನಿವಾರಕದಿಂದ ಪ್ರತಿನಿತ್ಯ ಸ್ವಚ್ಛಗೊಳಿಸುತ್ತಿರಬೇಕು.</p>.<p>ಉದ್ಯಾನವನ, ನಡಿಗೆ ಪಥದಲ್ಲಿ ಸಾಗುವಾಗಲೂ ಅಂತರ ಕಾಯ್ಡುಕೊಳ್ಳುವುದನ್ನು ಮರೆಯಕೂಡದು. ಹೊರಾಂಗಣ ಕ್ರೀಡೆ, ಶಿಬಿರಗಳನ್ನೂ ಸದ್ಯದ ಪರಿಸ್ಥಿತಿಯಲ್ಲಿ ನಡೆಸುವ ಹಾಗಿಲ್ಲ. ಅದೇ ರೀತಿ, ಸೂಕ್ತ ಮಾರ್ಗಸೂಚಿ ಬಿಡುಗಡೆಯಾಗುವವರೆಗೂ ಸಾರ್ವಜನಿಕ ಜಿಮ್ಗಳು, ಈಜುಕೊಳವನ್ನು ಬಳಸುವ ಹಾಗಿಲ್ಲ.</p>.<p>ಮನೆ ಕ್ವಾರಂಟೈನ್ಗೆ ಒಳಗಾದವರು ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿವಾಸಿ ಕಲ್ಯಾಣ ಸಂಘಟನೆಗಳು ನೋಡಿಕೊಳ್ಳಬೇಕು. ಒಂದು ವೇಳೆ ಮನೆಯಿಂದ ಹೊರ ಬಂದಲ್ಲಿ ಕೂಡಲೇ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಲಾಗಿದೆ.</p>.<p><strong>ಆಪ್ತಮಿತ್ರ ಸಹಾಯವಾಣಿ ಸಂಖ್ಯೆ: </strong>14410</p>.<p><strong>ನಿವಾಸಿಗಳು ಅನುಸರಿಸಬೇಕಾದ ಸೂಚನೆಗಳು</strong><br />* ನೆರೆಹೊರೆಯವರ ಆರೋಗ್ಯದ ಸ್ಥಿತಿಗತಿಯ ನಿಗಾ ಇಟ್ಟಿರಿ. ಮುಂಜಾಗರೂಕ ಕ್ರಮಗಳೊಂದಿಗೆ ಎಚ್ಚರಿಕೆಯಿಂದ ಇರಿ<br />* ಕಳೆದ 14 ದಿನಗಳಲ್ಲಿ ವಿದೇಶ, ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ್ದಲ್ಲಿ ಅಥವಾ ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಲ್ಲಿ ಆರೋಗ್ಯ ಅಧಿಕಾರಿಗೆ ಮಾಹಿತಿ ನೀಡಿ<br />* ವಿದೇಶ ಅಥವಾ ಅನ್ಯ ರಾಜ್ಯಗಳಿಂದ ಬಂದಿದ್ದಲ್ಲಿ ಕಟ್ಟುನಿಟ್ಟಾಗಿ 14 ದಿನಗಳು ಮನೆಯ ಕ್ವಾರಂಟೈನ್ಗೆ ಒಳಗಾಗಿ<br />* ಯಾವುದೇ ನಿವಾಸಿ ವಿದೇಶ ಅಥವಾ ಅನ್ಯ ರಾಜ್ಯಗಳಿಂದ ಬಂದಲ್ಲಿ ಕೂಡಲೇ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ<br />* 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರು ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಿ<br />* ಮಕ್ಕಳು ಗುಂಪು ಗುಂಪಾಗಿ ಸೇರದಂತೆ ನೋಡಿಕೊಳ್ಳಿ. ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ<br />* ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>