ಬೆಂಗಳೂರು, ರಾಮನಗರ ಮತ್ತಿತರ ಕಡೆಗಳಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿ, ‘ಜಲಧಾರೆಯಿಂದಲೇ ಮಳೆಯಾಗಿದೆ ಎಂದು ಅವರು ಹೇಳಿದ್ದರು. ಈಗ ಅತಿವೃಷ್ಟಿಯಾಗಿದೆ. ಅದಕ್ಕೂ ಅವರ ಯಾತ್ರೆ ಕಾರಣವೆ? ರಾಮನಗರ ಜಿಲ್ಲೆ ಮಳೆಯಿಂದ ಮುಳುಗಿರುವುದು, ಪಾಕಿಸ್ತಾನದ ಪ್ರವಾಹಕ್ಕೂ ಅವರೇ ಕಾರಣವಾ’ ಎಂದು ಕೇಳಿದರು.