ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವಿಹಿಂಪ ರಾಷ್ಟ್ರೀಯ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ವಿಷ್ಣು ಸದಾಶಿವ, ‘ಧರ್ಮ ನಿರಪೇಕ್ಷತೆಯ ಹೆಸರಿನಲ್ಲಿ ಹಿಂದೂ ವಿರೋಧಿ ನಿಲುವು ಅನುಸರಿಸುತ್ತಿದ್ದವರೇ ಈಗ, ಕುಲ–ಗೋತ್ರ ಹೇಳಿಕೊಂಡು ಮಠ–ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. 2014ರ ಬಳಿಕ ಭಾರತದ ಸಮಾಜ ಮಾತ್ರವಲ್ಲ, ಶಾಸನ ಸಭೆಯಲ್ಲೂ ಬದಲಾವಣೆಯಾಗುತ್ತಿದ್ದು, ‘ಹಿಂದೂ’ ಎಂದು ಗರ್ವದಿಂದ ಹೇಳುವ ಕಾಲ ಶುರುವಾಗಿದೆ’ ಎಂದು ಅವರು ಹೇಳಿದರು.