ಗುಬ್ಬಿ ವೀರಣ್ಣ ರಂಗಭೂಮಿ ಕ್ಷೇತ್ರದ ಮೇರು ಪ್ರತಿಭೆ. ಶ್ರೀ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಸಂಘವು ನೂರು ವರ್ಷ ಪೂರೈಸುವಲ್ಲಿ ಇವರ ಪಾತ್ರ ಹಿರಿದು. ರಂಗಭೂಮಿಗೆ ಮತ್ತು ಚಿತ್ರರಂಗಕ್ಕೆ ನೂರಾರು ಕಲಾವಿದರನ್ನು ಕೊಡುಗೆಯಾಗಿ ಕೊಟ್ಟವರು ಗುಬ್ಬಿ ವೀರಣ್ಣನವರು. ವೀರಣ್ಣನವರ ಸಮಾಧಿ ಮತ್ತು ಅದರ ಸುತ್ತಲಿನ ಸ್ಥಳದ ಈಗಿನ ಸ್ಥಿತಿಯು ದಿಗಿಲು ಹುಟ್ಟಿಸುವಂತಿದೆ.