<p><strong>ಬೆಂಗಳೂರು: </strong>ಕಾಂಗ್ರೆಸ್ನ ಕೆಲವು ನಾಯಕರ ಹೆಸರುಗಳನ್ನು ಹೋಲುವ ವ್ಯಕ್ತಿಗಳೂ ಸೇರಿದಂತೆ ಅನೇಕರಿಗೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ 2014– 16ರ ನಡುವೆ ₹ 23 ಕೋಟಿ ಪಾವತಿಸಿರುವ ಸಂಗತಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆಗಳಿಂದ ಬಯಲಾಗಿದೆ.</p>.<p>ಕಳೆದ ವರ್ಷ ಶಿವಕುಮಾರ್ ಅವರ ಸದಾಶಿವನಗರದ ಮನೆಯ ಮೇಲೆ ದಾಳಿ ನಡೆಸಿದ ಐ.ಟಿ ಅಧಿಕಾರಿಗಳು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. Dks/Ps/Ls/s-1 ಫೋಲ್ಡರ್ನ ಪುಟ ಸಂಖ್ಯೆ 72– 73ರಲ್ಲಿ ಯಾರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬ ಮಾಹಿತಿ ಇದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.</p>.<p>ಆದರೆ, ‘ಇದು ತಮ್ಮ ಕೈ ಬರಹ ಅಲ್ಲ’ ಎಂದು ಸಚಿವ ಶಿವಕುಮಾರ್ ಹೇಳಿದ್ದಾರೆ. ವಿಚಾರಣೆ ವೇಳೆ ಐ.ಟಿ ಅಧಿಕಾರಿಗಳು ಹಣ ಪಾವತಿ ಮಾಡಿರುವ ಕುರಿತು ಸಚಿವರನ್ನು ಕೇಳಿದ್ದಾರೆ. ಅದಕ್ಕೆ, ತಾವು ಯಾರಿಗೂ ಹಣ ಪಾವತಿಸಿಲ್ಲ ಎಂದು ಅವರು ಉತ್ತರಿಸಿದ್ದಾರೆ.</p>.<p>ಫೋಲ್ಡರ್ನಲ್ಲಿ ಕೊಂಡಯ್ಯ, ಮುನಿಯಪ್ಪ, ಗುಲಾಂ, ದೆಹಲಿ ರಾಜೇಂದ್ರ ಎನ್ನುವ ಹೆಸರುಗಳಿವೆ. ಇವು ಕಾಂಗ್ರೆಸ್ ನಾಯಕರ ಹೆಸರುಗಳೇ ಅಥವಾ ಬೇರೆಯವರದ್ದೇ ಎಂದು ಸ್ಪಷ್ಟವಾಗಿಲ್ಲ. ಡಿಸೆಂಬರ್ 15ರಂದು ಕೊಂಡಯ್ಯ₹25 ಲಕ್ಷ, ಮುನಿಯಪ್ಪ ₹25 ಲಕ್ಷ, ಜನವರಿ 19ರಂದು ಲಿಂಗಪ್ಪ ₹20 ಲಕ್ಷ, ವಿಜಯ್ ಮುಳಗುಂದ್ ₹2 ಕೋಟಿ, ಗುಲಾಂ ₹1 ಕೋಟಿ, ರಾಜೇಂದ್ರ ₹2 ಕೋಟಿ ಎಂಬ ಪ್ರಸ್ತಾಪವಿದೆ. ಇದಲ್ಲದೆ, ಇನ್ನೂ ಅನೇಕರ ಹೆಸರುಗಳು ಪಟ್ಟಿಯಲ್ಲಿವೆ.</p>.<p>ಇದೇ ಫೋಲ್ಡರ್ನ ಒಂದನೇ ಪುಟದಲ್ಲಿ ಬೇರೆ ಬೇರೆ ಸ್ಥಳಗಳ ಮುಂದೆ ನಮೂದಿಸಿರುವ ₹ 43.18 ಕೋಟಿ ಠೇವಣಿ ಕುರಿತ ಉಲ್ಲೇಖವಿದೆ. ಇದನ್ನು ಶಿವಕುಮಾರ್ ಒಪ್ಪಿಕೊಂಡಿಲ್ಲ. ಈ ಬರಹವೂ ತಮ್ಮದಲ್ಲ ಎಂದು ಹೇಳಿದ್ದಾರೆ.</p>.<p>ಮನೆ ₹7.42 ಕೋಟಿ, ದೆಹಲಿ ಮನೆ ₹7.45 ಕೋಟಿ, ಫ್ಲ್ಯಾಟ್ಸ್ ಡಿಕೆಎಸ್ ₹10.85 ಕೋಟಿ, ಶೋಭಾ ಲೇಔಟ್ ₹1.78 ಕೋಟಿ, ದವನಂ₹ 9.78 ಕೋಟಿ ಎಂಬ ವಿವರಗಳಿವೆ.</p>.<p>ಶಿವಕುಮಾರ್ ಅವರ ಆಪ್ತರಾಗಿರುವ ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ರಾಜೇಂದ್ರ, ಸುನೀಲ್ ಕುಮಾರ್ ಶರ್ಮ, ಸಚಿನ್ ನಾರಾಯಣ್, ಚಂದ್ರಶೇಖರ್, ರಂಗನಾಥ್, ಸುಮಾ, ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ<br />ಒಳಗೊಂಡಂತೆ ಅನೇಕರ ಜತೆ ಹೊಂದಿರುವವ್ಯಾವಹಾರಿಕ ಸಂಬಂಧ ಕುರಿತು ಶಿವಕುಮಾರ್ ಅವರನ್ನುಪ್ರಶ್ನಿಸಲಾಗಿದೆ.</p>.<p>ವಿವಿಧ ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ನಿರ್ಮಾಣ ಕಂಪೆನಿಗಳ ಜೊತೆಗಿನ ಜಂಟಿ ಅಭಿವೃದ್ಧಿ ಒಪ್ಪಂದದಿಂದ ಸಚಿವ ಶಿವಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರಿಗೆ 2014–15ರಿಂದ 2016–17ರವರೆಗೆ ₹206 ಕೋಟಿ ಬಂಡವಾಳ ಬಂದಿದೆ. ಐ.ಟಿ ವಶದಲ್ಲಿರುವ ದಾಖಲೆಗಳಲ್ಲಿ ಇದರ ಪ್ರಸ್ತಾಪವಿದೆ. ಈ ಬಗ್ಗೆ ಶಿವಕುಮಾರ್ ವಿವರಣೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕಾಂಗ್ರೆಸ್ನ ಕೆಲವು ನಾಯಕರ ಹೆಸರುಗಳನ್ನು ಹೋಲುವ ವ್ಯಕ್ತಿಗಳೂ ಸೇರಿದಂತೆ ಅನೇಕರಿಗೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ 2014– 16ರ ನಡುವೆ ₹ 23 ಕೋಟಿ ಪಾವತಿಸಿರುವ ಸಂಗತಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆಗಳಿಂದ ಬಯಲಾಗಿದೆ.</p>.<p>ಕಳೆದ ವರ್ಷ ಶಿವಕುಮಾರ್ ಅವರ ಸದಾಶಿವನಗರದ ಮನೆಯ ಮೇಲೆ ದಾಳಿ ನಡೆಸಿದ ಐ.ಟಿ ಅಧಿಕಾರಿಗಳು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. Dks/Ps/Ls/s-1 ಫೋಲ್ಡರ್ನ ಪುಟ ಸಂಖ್ಯೆ 72– 73ರಲ್ಲಿ ಯಾರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬ ಮಾಹಿತಿ ಇದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.</p>.<p>ಆದರೆ, ‘ಇದು ತಮ್ಮ ಕೈ ಬರಹ ಅಲ್ಲ’ ಎಂದು ಸಚಿವ ಶಿವಕುಮಾರ್ ಹೇಳಿದ್ದಾರೆ. ವಿಚಾರಣೆ ವೇಳೆ ಐ.ಟಿ ಅಧಿಕಾರಿಗಳು ಹಣ ಪಾವತಿ ಮಾಡಿರುವ ಕುರಿತು ಸಚಿವರನ್ನು ಕೇಳಿದ್ದಾರೆ. ಅದಕ್ಕೆ, ತಾವು ಯಾರಿಗೂ ಹಣ ಪಾವತಿಸಿಲ್ಲ ಎಂದು ಅವರು ಉತ್ತರಿಸಿದ್ದಾರೆ.</p>.<p>ಫೋಲ್ಡರ್ನಲ್ಲಿ ಕೊಂಡಯ್ಯ, ಮುನಿಯಪ್ಪ, ಗುಲಾಂ, ದೆಹಲಿ ರಾಜೇಂದ್ರ ಎನ್ನುವ ಹೆಸರುಗಳಿವೆ. ಇವು ಕಾಂಗ್ರೆಸ್ ನಾಯಕರ ಹೆಸರುಗಳೇ ಅಥವಾ ಬೇರೆಯವರದ್ದೇ ಎಂದು ಸ್ಪಷ್ಟವಾಗಿಲ್ಲ. ಡಿಸೆಂಬರ್ 15ರಂದು ಕೊಂಡಯ್ಯ₹25 ಲಕ್ಷ, ಮುನಿಯಪ್ಪ ₹25 ಲಕ್ಷ, ಜನವರಿ 19ರಂದು ಲಿಂಗಪ್ಪ ₹20 ಲಕ್ಷ, ವಿಜಯ್ ಮುಳಗುಂದ್ ₹2 ಕೋಟಿ, ಗುಲಾಂ ₹1 ಕೋಟಿ, ರಾಜೇಂದ್ರ ₹2 ಕೋಟಿ ಎಂಬ ಪ್ರಸ್ತಾಪವಿದೆ. ಇದಲ್ಲದೆ, ಇನ್ನೂ ಅನೇಕರ ಹೆಸರುಗಳು ಪಟ್ಟಿಯಲ್ಲಿವೆ.</p>.<p>ಇದೇ ಫೋಲ್ಡರ್ನ ಒಂದನೇ ಪುಟದಲ್ಲಿ ಬೇರೆ ಬೇರೆ ಸ್ಥಳಗಳ ಮುಂದೆ ನಮೂದಿಸಿರುವ ₹ 43.18 ಕೋಟಿ ಠೇವಣಿ ಕುರಿತ ಉಲ್ಲೇಖವಿದೆ. ಇದನ್ನು ಶಿವಕುಮಾರ್ ಒಪ್ಪಿಕೊಂಡಿಲ್ಲ. ಈ ಬರಹವೂ ತಮ್ಮದಲ್ಲ ಎಂದು ಹೇಳಿದ್ದಾರೆ.</p>.<p>ಮನೆ ₹7.42 ಕೋಟಿ, ದೆಹಲಿ ಮನೆ ₹7.45 ಕೋಟಿ, ಫ್ಲ್ಯಾಟ್ಸ್ ಡಿಕೆಎಸ್ ₹10.85 ಕೋಟಿ, ಶೋಭಾ ಲೇಔಟ್ ₹1.78 ಕೋಟಿ, ದವನಂ₹ 9.78 ಕೋಟಿ ಎಂಬ ವಿವರಗಳಿವೆ.</p>.<p>ಶಿವಕುಮಾರ್ ಅವರ ಆಪ್ತರಾಗಿರುವ ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ರಾಜೇಂದ್ರ, ಸುನೀಲ್ ಕುಮಾರ್ ಶರ್ಮ, ಸಚಿನ್ ನಾರಾಯಣ್, ಚಂದ್ರಶೇಖರ್, ರಂಗನಾಥ್, ಸುಮಾ, ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ<br />ಒಳಗೊಂಡಂತೆ ಅನೇಕರ ಜತೆ ಹೊಂದಿರುವವ್ಯಾವಹಾರಿಕ ಸಂಬಂಧ ಕುರಿತು ಶಿವಕುಮಾರ್ ಅವರನ್ನುಪ್ರಶ್ನಿಸಲಾಗಿದೆ.</p>.<p>ವಿವಿಧ ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ನಿರ್ಮಾಣ ಕಂಪೆನಿಗಳ ಜೊತೆಗಿನ ಜಂಟಿ ಅಭಿವೃದ್ಧಿ ಒಪ್ಪಂದದಿಂದ ಸಚಿವ ಶಿವಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರಿಗೆ 2014–15ರಿಂದ 2016–17ರವರೆಗೆ ₹206 ಕೋಟಿ ಬಂಡವಾಳ ಬಂದಿದೆ. ಐ.ಟಿ ವಶದಲ್ಲಿರುವ ದಾಖಲೆಗಳಲ್ಲಿ ಇದರ ಪ್ರಸ್ತಾಪವಿದೆ. ಈ ಬಗ್ಗೆ ಶಿವಕುಮಾರ್ ವಿವರಣೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>