ಡಿ.ಕೆ. ಸುರೇಶ್ ಅವರ ಆಪ್ತ ಸಹಾಯಕ ಬಿ.ಪದ್ಮನಾಭಯ್ಯ, ಡಿ.ಕೆ.ಶಿವಕುಮಾರ್ ಅವರ ಮಾಜಿ ಆಪ್ತ ಸಹಾಯಕ ಶೇಷಗಿರಿ, ಎಸ್.ಪದ್ಮರೇಖಾ, ಶಿವಾನಂದ್, ಕೆ.ನಂಜಪ್ಪ ಮತ್ತು ತಿಮ್ಮಯ್ಯ ಸೇರಿದಂತೆ ಎಂಟು ಮಂದಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಧೀಶರಾದ ಎಸ್.ಎಚ್. ಪುಷ್ಪಾಂಜಲಿ ದೇವಿ ವಜಾ ಮಾಡಿದ್ದಾರೆ.