'ಇಲಾಖೆ ಕಚೇರಿಯಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಕಾಡಿನಲ್ಲಿ ಬೆಳಿಗ್ಗೆ ಆನೆಯನ್ನು ಮೇಯಲು ಬಿಟ್ಟಿದ್ದೆವು. ಈ ವೇಳೆ ಐವರು ಮಾವುತರೂ ಇದ್ದರು. ಆದರೆ, ಏಕಾಏಕಿ ಬಂದ ಎರಡು ಆನೆಗಳು ಸಾಕಾನೆ ಮೇಲೆ ದಾಳಿ ಮಾಡಿದವು. ಕಾಡಾನೆಗಳನ್ನು ಬೆದರಿಸಲು ಮಾವುತರು ಪಟಾಕಿ ಮತ್ತು ಸಿಡಿಮದ್ದು ಸಿಡಿಸಿದರೂ ಆನೆಗಳ ದಾಳಿ ನಿಲ್ಲಲಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ಕೆ.ಜಿ. ರಾಥೋಡ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.