‘ಕಳ್ಳ, ಕಳ್ಳ... ಎಂದು ಕೂಗಿದ್ದ ಶ್ರೀಕಾಂತ್ ಆತನನ್ನು ಹಿಡಿಯಲು ಮುಂದಾಗಿದ್ದರು. ಆರೋಪಿ ಕಿಟಕಿಯಿಂದ ಹೊರಗೆ ಜಿಗಿದು ಪರಾರಿಯಾಗಿದ್ದ. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಇನ್ಸ್ಪೆಕ್ಟರ್ ಬಿ.ಎಸ್.ನಂದಕುಮಾರ್, ಪಿಎಸ್ಐ ಶಿವಪ್ಪ ನಾಯ್ಕರ್ ನೇತೃತ್ವದ ತಂಡಕ್ಕೆ ಕಾರ್ತಿಕ್ನೇ ಕೃತ್ಯ ಎಸಗಿದ್ದ ಬಗ್ಗೆ ಸುಳಿವು ಸಿಕ್ಕಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಅವರು ತಿಳಿಸಿದರು.