‘ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಇತರೆ ಹಿಂದುಳಿದ ಜಾತಿ (ಮೀಸಲಾತಿ ಅಥವಾ ನೇಮಕಾತಿ ಇತರ) ಕಾಯ್ದೆ– 1990’ರ ಸೆಕ್ಷನ್ 4 ಎಫ್ ಅಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರು ಎಂ.ಆರ್. ಚೇತನ, ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ. ದಾರಕೇಶ್ವರಯ್ಯ, ಬಿ.ಎಂ. ವಾಗೀಶ್ ಮತ್ತು ವಾಗೀಶ್ ಅವರ ಪತ್ನಿ ಪುಷ್ಪಾ ಡಿ.ಎಂ. ಎಂಬವರ ಜಾತಿ ಪ್ರಮಾಣಪತ್ರಗಳನ್ನು ರದ್ದುಪಡಿಸಿ 2023ರ ಏಪ್ರಿಲ್ 19 ಮತ್ತು ಜೂನ್ 27ರಂದು ಆದೇಶ ಹೊರಡಿಸಿದ್ದರು.