‘ಸರ್ಕಾರ್’ (2005) ಚಿತ್ರದ ಗೋವಿಂದ ಹಾಡು ವಿರೂಪಗೊಳಿಸಲಾಗಿದೆ. ಸಾಹಿತ್ಯವನ್ನು ತೊಡುಂಗಾ (ನಾನು ಮುರಿಯುತ್ತೇನೆ) ಎಂದು ಬದಲಾವಣೆ ಮಾಡಲಾಗಿದೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕರಿಗೆ ಧಕ್ಕೆ ತರುವ ರೀತಿಯಲ್ಲಿ ಬಿಂಬಿಸಲಾಗಿದೆ. ಸಮಾಜಕ್ಕೆ ತಪ್ಪು ಮಾಹಿತಿ ಹರಡುವ ಹಾಗೂ ದ್ವೇಷ ಸೃಷ್ಟಿಸಲು ಒಳಸಂಚು ಮಾಡಿರುವ ಅಮಿತ್ ಮತ್ತಿತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದರು.