ಆಂಧ್ರಪ್ರದೇಶದ ಈ ಬಸ್ ಕೇರಳದ ಕೊಯಿಕೋಡ್ನಿಂದ ಬೆಂಗಳೂರುಕಡೆಗೆ ತೆರಳುತ್ತಿತ್ತು. ಶುಕ್ರವಾರ ರಾತ್ರಿ 11 ಗಂಟೆಗೆ ಹೊರಟಿದ್ದು, ಶನಿವಾರ ಬೆಳಗಿನ ಜಾವ 3 ಗಂಟೆ ಹೊತ್ತಿಗೆ ಗಣಂಗೂರು ಬಳಿ ಬಂದಿದೆ. ಎಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಚಾಲಕ ಬಸ್ ನಿಲ್ಲಿಸಿ, ನಿದ್ರಿಸುತ್ತಿದ್ದ 36 ಮಂದಿ ಪ್ರಯಾಣಿಕರನ್ನು ಎಚ್ಚರಿಸಿ ಕೆಳಕ್ಕೆ ಇಳಿಸಿದ್ದಾರೆ.