ಕಲಬುರ್ಗಿ: ಭೀಮಾ ನದಿಯ ಪ್ರವಾಹ ಜಿಲ್ಲೆಯಲ್ಲಿ ಇಳಿಮುಖವಾಗಿದ್ದು, ಮನೆಗಳನ್ನು ಆವರಿಸಿಕೊಂಡಿದ್ದ ನೀರು ಕಡಿಮೆಯಾಗಿದೆ. ಹೀಗಾಗಿ ಕಾಳಜಿ ಕೇಂದ್ರಗಳಲ್ಲಿದ್ದ ಸಹಸ್ರಾರು ಜನರು ಬದುಕು ಕಟ್ಟಿಕೊಳ್ಳಲು ಮನೆಯತ್ತ ತೆರಳುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಇನ್ನೂ ಹಲವು ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸದೇ ಇರುವುದರಿಂದ ಪ್ರವಾಹದ ನೀರನ್ನೇ ಕುಡಿಯಬೇಕಾಗಿದೆ.