<p><strong>ಹೊಸನಗರ:</strong> ತಾಲ್ಲೂಕಿನ ಮಸಗಲ್ಲಿ ಕಲ್ಲು ಗಣಿಗಾರಿಕೆಯ ಗುತ್ತಿಗೆದಾರರು ರಾಜಧನ ಪಾವತಿ ಮಾಡದೇ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಜನ ಸಂಗ್ರಾಮ ಪರಿಷತ್ತಿನ ಅಖಿಲೇಶ ಚಿಪ್ಪಳಿ ಹಾಗೂ ಗಿರೀಶ ಆಚಾರಿ ಆರೋಪಿಸಿದ್ದಾರೆ.</p>.<p>ತಾಲ್ಲೂಕಿನ ಮಸಗಲ್ಲಿ ಸ.16ರಲ್ಲಿ 2009ರಲ್ಲಿ 23 ಜನ ಗುತ್ತಿಗೆದಾರರಿಗೆ 5 ವರ್ಷದ ಅವಧಿಗೆ ಕಲ್ಲು ಗಣಿಗಾರಿಕೆ ಮಾಡಲು ಷರತ್ತುಬದ್ಧ ಪರವಾನಗಿ ನೀಡಲಾಗಿತ್ತು. ಆದರೆ ಗಣಿ ಗುತ್ತಿಗೆ ಅವಧಿ ಪೂರ್ಣವಾಗಿ 4 ವರ್ಷ ಕಳೆದರೂ ಸುಮಾರು ₹77,81,761 ರಾಜಧನವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಸೂಲಿ ಮಾಡದೇ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಅವರು ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.</p>.<p>ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿ ಗುತ್ತಿಗೆದಾರರ ಆಮಿಷಕ್ಕೆ ಬಲಿಯಾಗಿ ರಾಜಧನವನ್ನು ಸಕಾಲದಲ್ಲಿ ಪಡೆದು ಸರ್ಕಾರದ ಖಜಾನೆಗೆ ಪಾವತಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.</p>.<p>ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ ಮಾಹಿತಿಯಂತೆ ಮಸಗಲ್ಲಿ ಕಲ್ಲು ಗಣಿಗಾರಿಕೆ ರಾಜಧನ ಬಾಕಿ ಇರುವ ಪಟ್ಟಿಯಲ್ಲಿ 23 ಗುತ್ತಿಗೆದಾರರ ಪೈಕಿ ಬಿ. ಗುರುಪ್ರಸಾದ ₹15.78 ಲಕ್ಷ, ಕೆ.ಬಿ. ಜಯಪ್ರಕಾಶ ₹14.13 ಲಕ್ಷ, ಕೆ.ಎಸ್. ಪ್ರಶಾಂತ ₹8.72 ಲಕ್ಷ, ಸಿ.ವಿ. ಚಂದ್ರಶೇಖರ ₹7.30 ಲಕ್ಷ, ಕೆ.ವೈ. ರಾಮಕೃಷ್ಣ ₹7.10 ಲಕ್ಷ, ವೆಂಕಟೇಶ ₹4.62 ಲಕ್ಷ, ಕಲ್ಯಾಣ ಕುಮಾರ ₹4.06 ಲಕ್ಷ, ಜಯಕುಮಾರ ₹3.48 ಲಕ್ಷ, ಚಂದ್ರಮೌಳಿ ₹3.24 ಲಕ್ಷ ಉಳಿಸಿಕೊಂಡಿದ್ದಾರೆ ಅವರು ಎಂದು ದಾಖಲೆ ನೀಡಿದರು.</p>.<p class="Subhead">ಲೋಕಾಯುಕ್ತರಿಗೆ ದೂರು: ಗಣಿಗುತ್ತಿಗೆ ಅವಧಿ ಪೂರ್ಣವಾದರೂ ಮಸಗಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ತನಿಖಾ ಹಂತದಲ್ಲಿದೆ. ಅವಧಿ ನಂತರದ ಅಕ್ರಮ ಗಣಿಗಾರಿಕೆಯಲ್ಲಿ ಬೊಕ್ಕಸಕ್ಕೆ ನಷ್ಟವಾದ ಹಣವನ್ನು ವಸೂಲಿ ಮಾಡಲು ಲೋಕಾಯುಕ್ತರಲ್ಲಿ ಮನವಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸನಗರ:</strong> ತಾಲ್ಲೂಕಿನ ಮಸಗಲ್ಲಿ ಕಲ್ಲು ಗಣಿಗಾರಿಕೆಯ ಗುತ್ತಿಗೆದಾರರು ರಾಜಧನ ಪಾವತಿ ಮಾಡದೇ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಜನ ಸಂಗ್ರಾಮ ಪರಿಷತ್ತಿನ ಅಖಿಲೇಶ ಚಿಪ್ಪಳಿ ಹಾಗೂ ಗಿರೀಶ ಆಚಾರಿ ಆರೋಪಿಸಿದ್ದಾರೆ.</p>.<p>ತಾಲ್ಲೂಕಿನ ಮಸಗಲ್ಲಿ ಸ.16ರಲ್ಲಿ 2009ರಲ್ಲಿ 23 ಜನ ಗುತ್ತಿಗೆದಾರರಿಗೆ 5 ವರ್ಷದ ಅವಧಿಗೆ ಕಲ್ಲು ಗಣಿಗಾರಿಕೆ ಮಾಡಲು ಷರತ್ತುಬದ್ಧ ಪರವಾನಗಿ ನೀಡಲಾಗಿತ್ತು. ಆದರೆ ಗಣಿ ಗುತ್ತಿಗೆ ಅವಧಿ ಪೂರ್ಣವಾಗಿ 4 ವರ್ಷ ಕಳೆದರೂ ಸುಮಾರು ₹77,81,761 ರಾಜಧನವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಸೂಲಿ ಮಾಡದೇ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಅವರು ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.</p>.<p>ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿ ಗುತ್ತಿಗೆದಾರರ ಆಮಿಷಕ್ಕೆ ಬಲಿಯಾಗಿ ರಾಜಧನವನ್ನು ಸಕಾಲದಲ್ಲಿ ಪಡೆದು ಸರ್ಕಾರದ ಖಜಾನೆಗೆ ಪಾವತಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.</p>.<p>ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ ಮಾಹಿತಿಯಂತೆ ಮಸಗಲ್ಲಿ ಕಲ್ಲು ಗಣಿಗಾರಿಕೆ ರಾಜಧನ ಬಾಕಿ ಇರುವ ಪಟ್ಟಿಯಲ್ಲಿ 23 ಗುತ್ತಿಗೆದಾರರ ಪೈಕಿ ಬಿ. ಗುರುಪ್ರಸಾದ ₹15.78 ಲಕ್ಷ, ಕೆ.ಬಿ. ಜಯಪ್ರಕಾಶ ₹14.13 ಲಕ್ಷ, ಕೆ.ಎಸ್. ಪ್ರಶಾಂತ ₹8.72 ಲಕ್ಷ, ಸಿ.ವಿ. ಚಂದ್ರಶೇಖರ ₹7.30 ಲಕ್ಷ, ಕೆ.ವೈ. ರಾಮಕೃಷ್ಣ ₹7.10 ಲಕ್ಷ, ವೆಂಕಟೇಶ ₹4.62 ಲಕ್ಷ, ಕಲ್ಯಾಣ ಕುಮಾರ ₹4.06 ಲಕ್ಷ, ಜಯಕುಮಾರ ₹3.48 ಲಕ್ಷ, ಚಂದ್ರಮೌಳಿ ₹3.24 ಲಕ್ಷ ಉಳಿಸಿಕೊಂಡಿದ್ದಾರೆ ಅವರು ಎಂದು ದಾಖಲೆ ನೀಡಿದರು.</p>.<p class="Subhead">ಲೋಕಾಯುಕ್ತರಿಗೆ ದೂರು: ಗಣಿಗುತ್ತಿಗೆ ಅವಧಿ ಪೂರ್ಣವಾದರೂ ಮಸಗಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ತನಿಖಾ ಹಂತದಲ್ಲಿದೆ. ಅವಧಿ ನಂತರದ ಅಕ್ರಮ ಗಣಿಗಾರಿಕೆಯಲ್ಲಿ ಬೊಕ್ಕಸಕ್ಕೆ ನಷ್ಟವಾದ ಹಣವನ್ನು ವಸೂಲಿ ಮಾಡಲು ಲೋಕಾಯುಕ್ತರಲ್ಲಿ ಮನವಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>