‘ಅಧಿಕೃತ ದಾಖಲೆಗಳ ಆಧಾರದಲ್ಲೇ ರಚಿತವಾಗಲಿರುವ ಈ ಕೃತಿಯು ಇಂಗ್ಲಿಷ್ಗೂ ಅನುವಾದಗೊಳ್ಳಲು ಅರ್ಹವಾಗುವಂತಿದೆ. ಹೀಗಾಗಿ ಕೃತಿಯ ನಿರ್ವಹಣೆಗೆ ಸಂಪಾದಕ ಮಂಡಳಿ ರಚಿಸಲಾಗಿದೆ. ಬರಹಗಾರ ಎಂ.ಜಿ.ಹೆಗಡೆ ಅವರು ಪ್ರಧಾನ ಸಂಪಾದಕರಾಗಿರಲಿದ್ದಾರೆ. ಸಾಹಿತಿ ಬೋಳುವಾರು ಮಹಮ್ಮದ್ಕುಂಞಿ, ಲೇಖಕನಾರಾಯಣ ಯಾಜಿ, ಕವಿ ಸುಬ್ರಾಯ ಚೊಕ್ಕಾಡಿ,ಪ್ರೊ.ಚಂದ್ರಶೇಖರ ವಸ್ತ್ರದ,ಪ್ರೊ.ಭುವನೇಶ್ವರಿ ಹೆಗಡೆ,ಕವಯತ್ರಿಸುಚಿತ್ರಾ ಹೆಗಡೆ ಸೇರಿ 19 ಮಂದಿ ಸಂಪಾದಕ ಮಂಡಳಿಯಲ್ಲಿ ಇರಲಿದ್ದಾರೆ’ ಎಂದು ವಿವರಿಸಿದೆ.