ವಿಧಾನ ಪರಿಷತ್ನಲ್ಲಿ ಜೆಡಿಎಸ್ನ ಕೆ.ಟಿ. ಶ್ರೀಕಂಠೇಗೌಡ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಅವರು, ‘ಕಂಪನಿ ಕಾಯ್ದೆಯ ಸೆಕ್ಷನ್ 135ರ ಪ್ರಕಾರ ಎಲ್ಲ ಉದ್ದಿಮೆಗಳೂ ತಮ್ಮ ಲಾಭಾಂಶದ ಶೇಕಡ 2ರಷ್ಟನ್ನು ಸಿಎಸ್ಆರ್ ನಿಧಿಯ ರೂಪದಲ್ಲಿ ಸಾರ್ವಜನಿಕ ಕೆಲಸಗಳಿಗೆ ಬಳಸಬೇಕು. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಈ ಮೊತ್ತವನ್ನು ಹೇಗೆ ಬಳಸಬೇಕೆಂಬ ನೀತಿ ಇಲ್ಲ. ಇದರಿಂದಾಗಿ ಸಿಎಸ್ಆರ್ ನಿಧಿ ಬಳಕೆಯಲ್ಲಿ ಕೆಲವು ಸಮಸ್ಯೆಗಳಿವೆ’ ಎಂದರು.