ಇದಕ್ಕೆ ಪ್ರತಿಕ್ರಿಯಿಸಿರುವ ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ, ‘ಕುರುಬರು ಯಾರನ್ನೂ ವಿರೋಧಿಸುವುದಿಲ್ಲ. ಯಾರ ಹಕ್ಕನ್ನೂ ಕಸಿಯುವುದಿಲ್ಲ. 1991ರಲ್ಲಿ ಬೇರೆ ರಾಜ್ಯದಲ್ಲಿರುವ ಜಾತಿಯ ಸಮನಾರ್ಥಕ ಪದದನ್ವಯ ಎಸ್.ಟಿ ಮೀಸಲಾತಿ ಪಟ್ಟಿಯೊಳಗೆ ಸೇರಿದ್ದಾರೆ. ಆದರೆ, 1950ರ ಗೆಜೆಟ್ನಲ್ಲಿ ಪ್ರಕಟವಾಗಿರುವ ಆರು ಜಾತಿಗಳಲ್ಲಿ ಜೇನು ಕುರುಬ ಮತ್ತು ಕಾಡು ಕುರುಬ ಕೂಡ ಇದೆ. 1977ರಲ್ಲಿ ಕುರುಬ ಜಾತಿಯ ಗೊಂಡ, ರಾಜಗೊಂಡ, ಕುರುಮನ್ಸ್, ಕಾಟ್ಟುನಾಯಕನ್, ಕುರುಬ ಸೇರಿ ಒಟ್ಟು ಆರು ಜಾತಿಗಳು ಎಸ್.ಟಿ ಪಟ್ಟಿಯಲ್ಲಿವೆ. ಕುರುಬರು ಹೊಸದಾಗಿ ಎಸ್.ಟಿ ಮೀಸಲಾತಿಗೆ ಬೇಡಿಕೆ ಸಲ್ಲಿಸುತ್ತಿಲ್ಲ’ ಎಂದಿದ್ದಾರೆ.