'ಈ ಬಗ್ಗೆ ಸಮಿತಿಗೆ ಕರೆ ಮಾಡಿದ ಅಂಗವಿಕಲರ ಪ್ರತಿನಿಧಿ, ಅಧಿಕಾರಿಯ ಕರ್ತವ್ಯಲೋಪದ ಬಗ್ಗೆ ಅಳಲು ತೋಡಿಕೊಂಡರು. ಲಾಕ್ಡೌನ್ನಿಂದ ಆಹಾರಕ್ಕೆ ಸಮಸ್ಯೆಯಾಗಿದೆ. ಇರುವ ನೆರವು ಪಡೆಯಲು ಅಧಿಕಾರಿಗಳೇ ಸ್ಪಂದಿಸುತ್ತಿಲ್ಲ‘ ಎಂದು ಮನವಿ ಮಾಡಿಕೊಂಡರು. ಈ ವಿಚಾರವನ್ನು ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ಬಂದ ನಂತರ ಅಧಿಕಾರಿ ಅಂಗವಿಕಲರ ಪಟ್ಟಿ ಸಿದ್ಧಪಡಿಸಿ ನೀಡಿದ್ದಾರೆ. ಸಾಮಾನ್ಯ ವ್ಯಕ್ತಿಗಳಂತೆ ಅಂಗವಿಲಕರು ಕಚೇರಿಗಳಿಗೆ ಅಲೆದು ನೆರವು ಪಡೆಯುವುದು ಕಷ್ಟವಾಗಿದೆ. ಲಾಕ್ಡೌನ್ ಇರುವ ಕಾರಣ ಅಂಗವಿಕಲರ ಮನೆ ಬಾಗಿಲಿಗೆ ಇಲಾಖೆ ಸೇವೆ ನೀಡದೆ, ಕಚೇರಿಗೆ ಬೀಗ ಹಾಕಿರುವುದು ಸರಿಯಲ್ಲ' ಎಂದು ದೂರಿದರು.