ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಜನತೆಗೆ ಕನ್ನಡದಲ್ಲೇ ಶುಭಾಶಯ ಕೋರಿದರು. 'ಯುಗಾದಿಯ ಹೊಸತನ ಮತ್ತು ನವೀಕರಣದ ಭರವಸೆಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಶುಭಾಶಯಗಳು. ಎಲ್ಲರಿಗೂ ಅಪರಿಮಿತ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿದ ವರ್ಷವನ್ನು ಆಶಿಸುತ್ತೇನೆ. ಈ ಶುಭ ಸಂದರ್ಭವು ಜೀವನದ ಪ್ರತಿಯೊಂದು ವಿಷಯದಲ್ಲೂ ನಿಮಗೆ ಸಂತೋಷವನ್ನು ತರಲಿ' ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.
ಎಲ್ಲರಿಗೂ ಯುಗಾದಿಯ ಶುಭಾಶಯಗಳು! pic.twitter.com/P0tL19AZ9D
— Narendra Modi (@narendramodi) April 9, 2024
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುಗಾದಿ ಸಂದೇಶವನ್ನು ಸಾರಿದ್ದಾರೆ. 'ದುಃಖದ ಕಹಿಬೇವು, ಸಂತಸದ ಸಿಹಿಬೆಲ್ಲ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ, ಭರವಸೆಯೊಂದಿಗೆ ಮುನ್ನಡೆಯಬೇಕು ಎನ್ನುವುದೇ ಯುಗಾದಿಯ ಜೀವನ ಸಂದೇಶ. ಯುಗ ಪರಿವರ್ತನೆಯ ಸಂದೇಶದ ಯುಗಾದಿ ಹಬ್ಬ ನಾವೆಲ್ಲ ಬಯಸುವ ಬದಲಾವಣೆಯನ್ನು ಹೊತ್ತು ತರಲಿ. ಸಮಸ್ತ ಜನರ ಬಾಳಲ್ಲಿ ಹೊಸ ಉತ್ಸಾಹ, ಹೊಸ ಚಿಂತನೆ, ಹೊಸ ಭರವಸೆಗಳನ್ನು ತುಂಬಲಿ. ಬೆಲ್ಲದಂತ ಸುಖ-ಸಮೃದ್ಧಿ ಮಾತ್ರವೇ ನಿಮ್ಮೆಲ್ಲರ ಬದುಕಲ್ಲಿ ತುಂಬಿರಲಿ ಎಂದು ಹಾರೈಸುತ್ತೇನೆ. ನಾಡಬಾಂಧವರಿಗೆ ಯುಗಾದಿಯ ಶುಭಾಶಯಗಳು' ಎಂದು ಹೇಳಿದ್ದಾರೆ.
ದುಃಖದ ಕಹಿಬೇವು,
— Siddaramaiah (@siddaramaiah) April 9, 2024
ಸಂತಸದ ಸಿಹಿಬೆಲ್ಲ
ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ,
ಭರವಸೆಯೊಂದಿಗೆ ಮುನ್ನಡೆಯಬೇಕು ಎನ್ನುವುದೇ ಯುಗಾದಿಯ ಜೀವನ ಸಂದೇಶ.
ಯುಗ ಪರಿವರ್ತನೆಯ ಸಂದೇಶದ ಯುಗಾದಿ ಹಬ್ಬ ನಾವೆಲ್ಲ ಬಯಸುವ ಬದಲಾವಣೆಯನ್ನು ಹೊತ್ತು ತರಲಿ.
ಸಮಸ್ತ ಜನರ ಬಾಳಲ್ಲಿ ಹೊಸ ಉತ್ಸಾಹ, ಹೊಸ ಚಿಂತನೆ, ಹೊಸ ಭರವಸೆಗಳನ್ನು ತುಂಬಲಿ. ಬೆಲ್ಲದಂತ ಸುಖ -… pic.twitter.com/bZm2dn8a9Y
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಯಗಳನ್ನು ಕೋರಿದ್ದಾರೆ. 'ಹೊಸತು ಎಂದರೆ ಸಂಭ್ರಮ. ಹೊಸತು ಎಂದರೆ ಉಲ್ಲಾಸ. ಹೊಸತು ಎಂದರೆ ಉತ್ಸಾಹ, ಹೊಸತು ಎಂದರೆ ಉತ್ಸವ. ಈ ಯುಗಾದಿ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ. ಅನ್ನದಾತನ ಬದುಕು ಹಸನಾಗಲಿ, ದುಡಿವ ಕೈಗಳಿಗೆ ಶಕ್ತಿ ತುಂಬಲಿ. ಎಲ್ಲರ ಬದುಕು ನವೀಕರಣಗೊಳ್ಳಲಿ. ನಲಿವು ನಿರಂತರವಾಗಿರಲಿ' ಎಂದು ಹೇಳಿದ್ದಾರೆ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
— DK Shivakumar (@DKShivakumar) April 9, 2024
ಹೊಸತು ಎಂದರೆ ಸಂಭ್ರಮ. ಹೊಸತು ಎಂದರೆ ಉಲ್ಲಾಸ. ಹೊಸತು ಎಂದರೆ ಉತ್ಸಾಹ, ಹೊಸತು ಎಂದರೆ ಉತ್ಸವ. ಈ ಯುಗಾದಿ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ.
ಅನ್ನದಾತನ ಬದುಕು ಹಸನಾಗಲಿ, ದುಡಿವ ಕೈಗಳಿಗೆ ಶಕ್ತಿ ತುಂಬಲಿ. ಎಲ್ಲರ ಬದುಕು ನವೀಕರಣಗೊಳ್ಳಲಿ. ನಲಿವು ನಿರಂತರವಾಗಿರಲಿ.#HappyUgadi pic.twitter.com/Z8XcIA27bQ
ಕೇಂದ್ರ ಗೃಹ ಸಚಿವ ಅಮಿತ್ ಶಾ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ್ದಾರೆ. 'ಯುಗಾದಿಯ ಶುಭ ಸಂದರ್ಭದಲ್ಲಿ ಕರ್ನಾಟಕದ ನನ್ನ ಎಲ್ಲಾ ಸಹೋದರ-ಸಹೋದರಿಯರಿಗೆ ಹೊಸ ವರ್ಷದ ಶುಭಕಾಮನೆಗಳು. ಸಂತೋಷದ ಈ ಸಂದರ್ಭದಲ್ಲಿ ಹಬ್ಬದ ಸ್ಫೂರ್ತಿ ಮತ್ತು ಸೊಬಗು ಸದಾ ನಿಮ್ಮ ಜೊತೆಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಕನ್ನಡದಲ್ಲೇ ಪೋಸ್ಟ್ ಮಾಡಿದ್ದಾರೆ.
ಯುಗಾದಿಯ ಶುಭ ಸಂದರ್ಭದಲ್ಲಿ ಕರ್ನಾಟಕದ ನನ್ನ ಎಲ್ಲಾ ಸಹೋದರ-ಸಹೋದರಿಯರಿಗೆ ಹೊಸ ವರ್ಷದ ಶುಭಕಾಮನೆಗಳು. ಸಂತೋಷದ ಈ ಸಂದರ್ಭದಲ್ಲಿ ಹಬ್ಬದ ಸ್ಫೂರ್ತಿ ಮತ್ತು ಸೊಬಗು ಸದಾ ನಿಮ್ಮ ಜೊತೆಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
— Amit Shah (Modi Ka Parivar) (@AmitShah) April 9, 2024
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. pic.twitter.com/kGoFOlQ2pG
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸಹ ಶುಭಾಶಯ ಕೋರಿದ್ದಾರೆ. 'ಪ್ರಕೃತಿ ಮತ್ತು ಬದುಕಿನ ನಡುವಿನ ಸಂಭ್ರಮವಾಗಿ ಮೇಳೈಸಿರುವ ಈ ಹಬ್ಬವೂ ನಾಡಿನಲ್ಲಿ ಉಂಟಾಗಿರುವ ದುರಿತ ಕಾಲವನ್ನು ಅಳಿಸಲಿ, ಬರದಿಂದ ಕಂಗೆಟ್ಟಿರುವ ಜನರ ಬಾಳಿಗೆ ನೆಮ್ಮದಿ, ಸುಖ-ಶಾಂತಿಯನ್ನು ನೀಡಲಿ. ಆ ವರುಣದೇವನು ಕರುಣೆ ತೋರಿ ಬರದ ಬೇಗೆಯನ್ನು ತೊಲಗಿಸಲಿ ಎಂದು ಪ್ರಾರ್ಥಿಸುತ್ತೇನೆ. ಕ್ರೋಧಿನಾಮ ಸಂವತ್ಸರವು ಎಲ್ಲರಿಗೂ ಶುಭವನ್ನೇ ತರಲಿ ಎಂದು ಆಶಿಸುತ್ತೇನೆ' ಎಂದು ಹೇಳಿದ್ದಾರೆ.
ನಾಡಿನ ಸಮಸ್ತ ಜನತೆಗೆ ನಮ್ಮೆಲ್ಲರ ಹೊಸ ವರುಷದ ದಿನವಾದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 9, 2024
ಪ್ರಕೃತಿ ಮತ್ತು ಬದುಕಿನ ನಡುವಿನ ಸಂಭ್ರಮವಾಗಿ ಮೇಳೈಸಿರುವ ಈ ಹಬ್ಬವೂ ನಾಡಿನಲ್ಲಿ ಉಂಟಾಗಿರುವ ದುರಿತ ಕಾಲವನ್ನು ಅಳಿಸಲಿ, ಬರದಿಂದ ಕಂಗೆಟ್ಟಿರುವ ಜನರ ಬಾಳಿಗೆ ನೆಮ್ಮದಿ, ಸುಖ-ಶಾಂತಿಯನ್ನು ನೀಡಲಿ. ಆ ವರುಣದೇವನು ಕರುಣೆ ತೋರಿ ಬರದ ಬೇಗೆಯನ್ನು… pic.twitter.com/ufSMTW6VIn
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.