ಬೆಂಗಳೂರು: ಎ ಖಾತೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಜನರನ್ನು ಲೂಟಿ ಹೊಡೆಯಲು ಹೊರಟಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಆರೋಪಕ್ಕೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ‘ಅವರ ಬುರುಡೆ ಪುರಾಣವನ್ನೆಲ್ಲಾ ಬಿಚ್ಚಿಡುತ್ತೇನೆ’ ಎಂದ ಕುಮಾರಸ್ವಾಮಿ ಅವರಿಗೆ, ‘ಎಲ್ಲವನ್ನೂ ಬಿಚ್ಚಿಡು. ನಿನ್ನದನ್ನೂ ಬಿಚ್ಚಿಡುವೆ’ ಎಂದು ಶಿವಕುಮಾರ್ ಗುಡುಗಿದ್ದಾರೆ.