ವಿಚಾರಣೆ ವೇಳೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪರ ವಕೀಲ ಪಿ.ಎನ್. ಮನಮೋಹನ್, 'ಎಸಿಬಿ ಮುಖ್ಯಸ್ಥ ಎಡಿಜಿಪಿ ಸೀಮಾಂತ ಕುಮಾರ್ ಸಿಂಗ್ ಅವರ ಸೇವಾ ದಾಖಲೆ ಮತ್ತು ವಿಚಾರಣಾ ಕೋರ್ಟ್ನಲ್ಲಿ ಎಸಿಬಿ ದಾಖಲಿಸಿರುವ ಬಿ ರಿಪೋರ್ಟ್ ಮಾಹಿತಿ ಸಲ್ಲಿಸುವಂತೆ ತಾವು ಇದೇ 7ರಂದು ನೀಡಿದ ಆದೇಶಕ್ಕೆ ಸುಪ್ರೀಂ ಕೊರ್ಟ್ ಸೋಮವಾರ ಬೆಳಿಗ್ಗೆ ತಡೆ ನೀಡಿದೆ. ಆದರೆ, ಮಹೇಶ್ ಜಾಮೀನು ಅರ್ಜಿ ವಿಚಾರಣೆ ಮುಂದುವರಿಸಬಹುದು ಎಂದು ತಿಳಿಸಿದೆ.