‘ಹೋರಾಟದ ಸಂದರ್ಭದಲ್ಲಿ ಒಂದು ಬಾರಿ ಅವರು ಸಹಕೈದಿ ಆಗಿದ್ದರ ಬಗ್ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ಎರಡು ಬಾರಿ ಸಹಕೈದಿ ಆಗಿದ್ದರ ಬಗ್ಗೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ ಎಂದು ಪಟ್ಟು ಹಿಡಿಯಲಾಗಿದೆ. ಎರಡು ದಶಕಗಳಿಂದ ಪಿಂಚಣಿ ಮಂಜೂರು ಮಾಡಿಲ್ಲ’ ಎಂದು ಬಳ್ಳಾರಿ ಜಿಲ್ಲೆಯ ಕಮಲಾಪುರದ 94 ವರ್ಷ ವಯಸ್ಸಿನ ಗುಂಡುರಾವ್ ದೇಸಾಯಿ ಅವರು ಅರ್ಜಿ ಸಲ್ಲಿಸಿದ್ದರು.