ಬೆಂಗಳೂರಿಗೆ ಬಂದಮೇಲೆ ಅವರಿಗೆ ಕ್ಯಾಂಪಸ್ ಅತಿಥಿ ಗೃಹದಲ್ಲಿ ಒಂದು ಕೋಣೆಯಲ್ಲಿ ವಸತಿ ಸೌಲಭ್ಯ ಒದಗಿಸಲಾಗಿತ್ತು. ‘ಇದು ತಾತ್ಕಾಲಿಕ ವ್ಯವಸ್ಥೆ. ನಂತರದಲ್ಲಿ ಅಗತ್ಯ ಸೌಲಭ್ಯಗಳ ವಸತಿ ಕಲ್ಪಿಸಲಾಗುವುದು’ ಎಂದು ಹೇಳಲಾಗಿತ್ತು. ಆದರೆ, 2009ರಿಂದಲೂ ಅವರು ಅದೇ ಅತಿಥಿ ಗೃಹದಲ್ಲಿದ್ದರೂ ದೈಹಿಕ ಸ್ಥಿತಿಗತಿಗೆ ಅನುಕೂಲಕರ ವಾತಾವರಣ ಇರುವ ವ್ಯವಸ್ಥೆಯನ್ನು ಕಲ್ಪಿಸಿರಲಿಲ್ಲ. ಏತನ್ಮಧ್ಯೆ, ಅವರಿಗೆ ನೀಡಲಾಗುತ್ತಿದ್ದ ಎಚ್ಆರ್ಎ ಅನ್ನೂ ತಡೆ ಹಿಡಿಯಲಾಗಿತ್ತು.