"ಅರ್ಜಿದಾರ ಶಿವಲಿಂಗಪ್ಪ ಬಿ.ಕೆರಕಲಮಟ್ಟಿ ವಿರುದ್ಧ ಶಿಕ್ಷಕ ಚಂದ್ರು ರಾಥೋಡ್ ಕ್ರಿಮಿನಲ್ ದೂರು ದಾಖಲಿಸಿರುವುದು, ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಆರ್ಥಿಕ ನೆರವು ಪಡೆದಿರುವುದು ಸಾಬೀತಾಗಿದೆ. ಆದರೆ, ಅವರ ಈ ದೂರುಗಳು ನಕಲಿಯಾಗಿದ್ದು, ಸುಳ್ಳಿನಿಂದ ಮತ್ತು ದುರುದ್ದೇಶದಿಂದ ಕೂಡಿವೆ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ತೆರಿಗೆ ಹಣದಿಂದ ಪಡೆದಿರುವ ₹ 1.5 ಲಕ್ಷ ವಾಪಸು ಪಡೆಯಬೇಕು" ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.