ಹೆಬ್ಬಾಳ ಶಾಸಕ ಬಿ.ಎಸ್.ಸುರೇಶ್ ಅವರ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಿ ಕಾಂಗ್ರೆಸ್ ಪಕ್ಷದ ಮತಗಳನ್ನು ಉಳಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿತು. ಅದಕ್ಕೆ ಪೂರಕವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ವಿರುದ್ಧ ಮೂರು ಸಲ ಪ್ರಚಾರ ಕೈಗೊಳ್ಳುವ ಮೂಲಕಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಕುರುಬ ಸಮುದಾಯದ ಮತ ಸಾರಾಸಗಟಾಗಿ ನಾಗರಾಜ್ ಪಾಲಾಗುವುದನ್ನು ತಡೆದರು. ಬಿಜೆಪಿ ಮತಗಳ ಜೊತೆಗೆ ತನ್ನ ವರ್ಚಸ್ಸೂ ಕೈಹಿಡಿಯಲಿದೆ ಎಂದು ನಂಬಿ ಪಕ್ಷಾಂತರ ಮಾಡಿದ್ದ ನಾಗರಾಜ್ ನಿರಾಶೆ ಅನುಭವಿಸಬೇಕಾಯಿತು.