<p><strong>ರಾಮನಗರ</strong>: ಕೆಲವು ನ್ಯಾಯಾಧೀಶರು ಜನಪ್ರಿಯತೆ ಹಿಂದೆ ಬಿದ್ದಿದ್ದಾರೆ. ಕೊಲೆ ಸೇರಿದಂತೆ ಯಾವುದೇ ಪ್ರಕರಣ ಬಂದರೂ ಜಾಮೀನು ಕೊಡುತ್ತಾರೆ ಇಲ್ಲವೇ ಪ್ರಕರಣವನ್ನೇ ಮುಗಿಸುತ್ತಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಕಳವಳ ವ್ಯಕ್ತಪಡಿಸಿದರು.</p>.<p>ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮತ್ತು ಜಿಲ್ಲಾ ವಕೀಲರ ಸಂಘ ನಗರದ ಕೋರ್ಟ್ ಸಂಕೀರ್ಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಇಂತಹ ನ್ಯಾಯಾಧೀಶರ ಮಕ್ಕಳನ್ನೇ ಯಾರಾದರೂ ಹೊಡೆದು ಹಾಕಬೇಕು. ಆಗಲೂ ಇವರು ಎರಡೇ ತಿಂಗಳಿಗೆ ಜಾಮೀನು ಕೊಡುತ್ತಾರೆಯೇ’ ಎಂದು ಅವರು ಪ್ರಶ್ನಿಸಿದರು. </p>.<p>ಹಣವಿದ್ದವರಿಗೆ ಮಾತ್ರ ನ್ಯಾಯ ಎಂಬ ಪರಿಸ್ಥಿತಿ ನಿರ್ಮಾಣವಾದರೆ ಸಮಾಜ ನೋಡುವವರು ಯಾರು? ಕಕ್ಷಿದಾರರು ಹೈಕೋರ್ಟ್ ಮೊರೆ ಹೋಗಲು ಕಷ್ಟಪಡುತ್ತಾರೆ. ಇನ್ನು ಸುಪ್ರೀಂ ಕೋರ್ಟ್ಗೆ ಹೋಗಲು ಎಷ್ಟು ಜನರಿಗೆ ಸಾಧ್ಯ ಎಂದು ಕೇಳಿದರು.</p>.<p>‘ನ್ಯಾಯ ಬಯಸಿ ಬರುವ ಕಕ್ಷಿದಾರರೇ ನಮಗೆ ದೇವರು. ಅವರು ಕೋರ್ಟ್ಗೆ ಬಾರದಿದ್ದರೆ ನಾವೆಲ್ಲರೂ ಅಪ್ರಸ್ತುತ. ಆ ದೇವರಿಗೆ ನ್ಯಾಯದ ಸ್ಪಂದನೆ ಸಿಗದಿದ್ದರೆ ನ್ಯಾಯಾಂಗ ಇದ್ದೂ ವ್ಯರ್ಥ. ಜನಸಾಮಾನ್ಯರು ನ್ಯಾಯಾಂಗದ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಚ್ಯುತಿ ಬಾರಬಾರದಂತೆ ನಾವು ನಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.</p>.<p>‘ದೇಶದಲ್ಲಿ ಇಂದು ಸ್ಥಿತ್ಯಂತರವಾಗುತ್ತಿದೆ. ದೇಶದ ಅಭ್ಯುದಯಕ್ಕೆ ಮತ್ತು ಸಾಮಾಜಿಕ ಪರಿವರ್ತನೆಗೆ ಕೊಡುಗೆ ನೀಡುವರು ಕಡಿಮೆಯಾಗುತ್ತಿದ್ದಾರೆ. ತಾವೂ ಸಾಮಾಜಿಕ ಎಂಜಿನಿಯರ್ಗಳು ಎಂಬುದನ್ನು ವಕೀಲರು ಮರೆತಿದ್ದಾರೆ. ವೃತ್ತಿಗೆ ಹಣದ ಸೋಂಕು ತಗುಲಿದ್ದು, ಎಲ್ಲರೂ ಅದರ ಹಿಂದೆಯೇ ಬಿದ್ದಿದ್ದಾರೆ’ ಎಂದು ನ್ಯಾ. ಸಂದೇಶ ಬೇಸರ ವ್ಯಕ್ತಪಡಿಸಿದರು.</p>.<p>ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ವಿ. ರೇಣುಕಾ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಮಿಟ್ಟಲ್ಕೊಡ್ ಎಸ್.ಎಸ್, ನಿರ್ದೇಶಕ ವಿಶಾಲ್ ರಘು ಎಚ್.ಎಸ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಎಂ. ಶ್ರೀವತ್ಸ, ಕಾರ್ಯದರ್ಶಿ ತಿಮ್ಮೇಗೌಡ ಟಿ. ಮತ್ತು ಸಂಘದ ಪದಾಧಿಕಾರಿಗಳು ಇದ್ದರು.</p>.<p><strong>‘ಸರಸ್ವತಿ ಇರುವೆಡೆ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿರುತ್ತಾಳೆ’</strong></p><p>‘ನಾನೆಂದೂ ಹಣದ ಹಿಂದೆ ಬಿದ್ದವನಲ್ಲ. ನಾನೇನಾದರೂ ಕಾಸು ಕೊಟ್ಟು ಕೆಲಸ ತೆಗೆದುಕೊಂಡಿದ್ದೇನೆ ಎಂದು ಯಾರಾದರೂ ಹೇಳಿ ನಿರೂಪಿಸಿದರೆ ನೇಣು ಹಾಕಿಕೊಳ್ಳುವೆ’ ಎಂದು ನ್ಯಾ. ಎಚ್.ಪಿ. ಸಂದೇಶ್ ಸವಾಲು ಹಾಕಿದರು.</p><p>‘ರೈತನ ಮಗನಾದ ನೀನು ಲಕ್ಷ್ಮಿ ಹಿಂದೆ ಬೀಳದೆ, ಸರಸ್ವತಿ ಹಿಂದೆ ಹೋಗು. ಸರಸ್ವತಿ ಇರುವೆಡೆ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿರುತ್ತಾಳೆ ಎಂದು 1992ರಲ್ಲಿ ನಾನು ವಕೀಲಿಕೆ ಶುರು ಮಾಡಿದಾಗ ನನ್ನ ಸೀನಿಯರ್ ಕೆ. ಅನಂತರಾಮಯ್ಯ ನನಗೆ ಕಿವಿಮಾತು ಹೇಳಿದ್ದರು’ ಎಂದರು.</p><p>‘ನಾವು ಸತ್ತಾಗ ಏನೂ ಒಯ್ಯುವುದಿಲ್ಲ. ವಕೀಲರು ಸಮಾಜದ ದನಿಯಾದಾಗಲಷ್ಟೇ ಕರಿ ಕೋಟಿಗೆ ಬೆಲೆ ಬರುತ್ತದೆ. ಆದರೆ, ಇಂದು ಹಿರಿಯ ವಕೀಲರು ಲಕ್ಷಗಟ್ಟಲೆ ಶುಲ್ಕ ವಿಧಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><blockquote>ವಕೀಲರು ಸನ್ಯಾಸಿಯಂತೆ ಜೀವಿಸಬೇಕು. ಕುದುರೆ ಥರಾ ಕೆಲಸ ಮಾಡಬೇಕು. ವಕೀಲನಿಗೆ ಒಂದು ಕೇಸ್ ತಪ್ಪಿದರೆ ಮತ್ತೊಂದು ಸಿಗುತ್ತದೆ. ಕಕ್ಷಿದಾರನಿಗೆ ನ್ಯಾಯ ಸಿಗದಿದ್ದರೆ ಆತನ ಬದುಕು ಮುಳುಗುತ್ತದೆ.</blockquote><span class="attribution">ಎಚ್.ಪಿ. ಸಂದೇಶ್, ಹೈಕೋರ್ಟ್ ನ್ಯಾಯಮೂರ್ತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಕೆಲವು ನ್ಯಾಯಾಧೀಶರು ಜನಪ್ರಿಯತೆ ಹಿಂದೆ ಬಿದ್ದಿದ್ದಾರೆ. ಕೊಲೆ ಸೇರಿದಂತೆ ಯಾವುದೇ ಪ್ರಕರಣ ಬಂದರೂ ಜಾಮೀನು ಕೊಡುತ್ತಾರೆ ಇಲ್ಲವೇ ಪ್ರಕರಣವನ್ನೇ ಮುಗಿಸುತ್ತಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಕಳವಳ ವ್ಯಕ್ತಪಡಿಸಿದರು.</p>.<p>ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮತ್ತು ಜಿಲ್ಲಾ ವಕೀಲರ ಸಂಘ ನಗರದ ಕೋರ್ಟ್ ಸಂಕೀರ್ಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಇಂತಹ ನ್ಯಾಯಾಧೀಶರ ಮಕ್ಕಳನ್ನೇ ಯಾರಾದರೂ ಹೊಡೆದು ಹಾಕಬೇಕು. ಆಗಲೂ ಇವರು ಎರಡೇ ತಿಂಗಳಿಗೆ ಜಾಮೀನು ಕೊಡುತ್ತಾರೆಯೇ’ ಎಂದು ಅವರು ಪ್ರಶ್ನಿಸಿದರು. </p>.<p>ಹಣವಿದ್ದವರಿಗೆ ಮಾತ್ರ ನ್ಯಾಯ ಎಂಬ ಪರಿಸ್ಥಿತಿ ನಿರ್ಮಾಣವಾದರೆ ಸಮಾಜ ನೋಡುವವರು ಯಾರು? ಕಕ್ಷಿದಾರರು ಹೈಕೋರ್ಟ್ ಮೊರೆ ಹೋಗಲು ಕಷ್ಟಪಡುತ್ತಾರೆ. ಇನ್ನು ಸುಪ್ರೀಂ ಕೋರ್ಟ್ಗೆ ಹೋಗಲು ಎಷ್ಟು ಜನರಿಗೆ ಸಾಧ್ಯ ಎಂದು ಕೇಳಿದರು.</p>.<p>‘ನ್ಯಾಯ ಬಯಸಿ ಬರುವ ಕಕ್ಷಿದಾರರೇ ನಮಗೆ ದೇವರು. ಅವರು ಕೋರ್ಟ್ಗೆ ಬಾರದಿದ್ದರೆ ನಾವೆಲ್ಲರೂ ಅಪ್ರಸ್ತುತ. ಆ ದೇವರಿಗೆ ನ್ಯಾಯದ ಸ್ಪಂದನೆ ಸಿಗದಿದ್ದರೆ ನ್ಯಾಯಾಂಗ ಇದ್ದೂ ವ್ಯರ್ಥ. ಜನಸಾಮಾನ್ಯರು ನ್ಯಾಯಾಂಗದ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಚ್ಯುತಿ ಬಾರಬಾರದಂತೆ ನಾವು ನಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.</p>.<p>‘ದೇಶದಲ್ಲಿ ಇಂದು ಸ್ಥಿತ್ಯಂತರವಾಗುತ್ತಿದೆ. ದೇಶದ ಅಭ್ಯುದಯಕ್ಕೆ ಮತ್ತು ಸಾಮಾಜಿಕ ಪರಿವರ್ತನೆಗೆ ಕೊಡುಗೆ ನೀಡುವರು ಕಡಿಮೆಯಾಗುತ್ತಿದ್ದಾರೆ. ತಾವೂ ಸಾಮಾಜಿಕ ಎಂಜಿನಿಯರ್ಗಳು ಎಂಬುದನ್ನು ವಕೀಲರು ಮರೆತಿದ್ದಾರೆ. ವೃತ್ತಿಗೆ ಹಣದ ಸೋಂಕು ತಗುಲಿದ್ದು, ಎಲ್ಲರೂ ಅದರ ಹಿಂದೆಯೇ ಬಿದ್ದಿದ್ದಾರೆ’ ಎಂದು ನ್ಯಾ. ಸಂದೇಶ ಬೇಸರ ವ್ಯಕ್ತಪಡಿಸಿದರು.</p>.<p>ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ವಿ. ರೇಣುಕಾ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಮಿಟ್ಟಲ್ಕೊಡ್ ಎಸ್.ಎಸ್, ನಿರ್ದೇಶಕ ವಿಶಾಲ್ ರಘು ಎಚ್.ಎಸ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಎಂ. ಶ್ರೀವತ್ಸ, ಕಾರ್ಯದರ್ಶಿ ತಿಮ್ಮೇಗೌಡ ಟಿ. ಮತ್ತು ಸಂಘದ ಪದಾಧಿಕಾರಿಗಳು ಇದ್ದರು.</p>.<p><strong>‘ಸರಸ್ವತಿ ಇರುವೆಡೆ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿರುತ್ತಾಳೆ’</strong></p><p>‘ನಾನೆಂದೂ ಹಣದ ಹಿಂದೆ ಬಿದ್ದವನಲ್ಲ. ನಾನೇನಾದರೂ ಕಾಸು ಕೊಟ್ಟು ಕೆಲಸ ತೆಗೆದುಕೊಂಡಿದ್ದೇನೆ ಎಂದು ಯಾರಾದರೂ ಹೇಳಿ ನಿರೂಪಿಸಿದರೆ ನೇಣು ಹಾಕಿಕೊಳ್ಳುವೆ’ ಎಂದು ನ್ಯಾ. ಎಚ್.ಪಿ. ಸಂದೇಶ್ ಸವಾಲು ಹಾಕಿದರು.</p><p>‘ರೈತನ ಮಗನಾದ ನೀನು ಲಕ್ಷ್ಮಿ ಹಿಂದೆ ಬೀಳದೆ, ಸರಸ್ವತಿ ಹಿಂದೆ ಹೋಗು. ಸರಸ್ವತಿ ಇರುವೆಡೆ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿರುತ್ತಾಳೆ ಎಂದು 1992ರಲ್ಲಿ ನಾನು ವಕೀಲಿಕೆ ಶುರು ಮಾಡಿದಾಗ ನನ್ನ ಸೀನಿಯರ್ ಕೆ. ಅನಂತರಾಮಯ್ಯ ನನಗೆ ಕಿವಿಮಾತು ಹೇಳಿದ್ದರು’ ಎಂದರು.</p><p>‘ನಾವು ಸತ್ತಾಗ ಏನೂ ಒಯ್ಯುವುದಿಲ್ಲ. ವಕೀಲರು ಸಮಾಜದ ದನಿಯಾದಾಗಲಷ್ಟೇ ಕರಿ ಕೋಟಿಗೆ ಬೆಲೆ ಬರುತ್ತದೆ. ಆದರೆ, ಇಂದು ಹಿರಿಯ ವಕೀಲರು ಲಕ್ಷಗಟ್ಟಲೆ ಶುಲ್ಕ ವಿಧಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><blockquote>ವಕೀಲರು ಸನ್ಯಾಸಿಯಂತೆ ಜೀವಿಸಬೇಕು. ಕುದುರೆ ಥರಾ ಕೆಲಸ ಮಾಡಬೇಕು. ವಕೀಲನಿಗೆ ಒಂದು ಕೇಸ್ ತಪ್ಪಿದರೆ ಮತ್ತೊಂದು ಸಿಗುತ್ತದೆ. ಕಕ್ಷಿದಾರನಿಗೆ ನ್ಯಾಯ ಸಿಗದಿದ್ದರೆ ಆತನ ಬದುಕು ಮುಳುಗುತ್ತದೆ.</blockquote><span class="attribution">ಎಚ್.ಪಿ. ಸಂದೇಶ್, ಹೈಕೋರ್ಟ್ ನ್ಯಾಯಮೂರ್ತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>