ಶರವಣ ಅವರ ಮಾತನ್ನು ವಿರೋಧಿಸಿದ ಜಯಮಾಲಾ, ದುಡ್ಡಿಲ್ಲ ಎಂಬ ಕಾರಣಕ್ಕೆ ಅದೆಷ್ಟೋ ಮದುವೆಯಾಗದ ಯುವತಿಯರ ಪಾಲಿಗೆ ಇದು ಆಶಾಕಿರಣ, ಸ್ಥಳದಲ್ಲೇ ನೋಂದಣಿ ಮಾಡುವ ವ್ಯವಸ್ಥೆಯನ್ನೂ ಮಾಡಬೇಕು ಎಂದರು. ಈ ಹಂತದಲ್ಲಿ ಮಾಧುಸ್ವಾಮಿ ಅವರು ಯುವಕರಿಗೆ ಹೆಣ್ಣು ಸಿಗದೆ ಇರುವುದನ್ನು ಉಲ್ಲೇಖಿಸಿದರು. ಸಚಿವ ಸಿ.ಟಿ.ರವಿ ಸಹ ಇದೇ ಮಾತನ್ನು ಆಡಿದರು.