‘ನಾನು ಆ ಕಚೇರಿಗೆ ಹೋಗಿದ್ದು, ಆ ವ್ಯಕ್ತಿಯನ್ನು ಭೇಟಿಯಾಗಿದ್ದೂ ಅದೇ ಮೊದಲು. ನಾನು ಅಲ್ಲಿ ಖರ್ಜೂರವನ್ನು ಬಾಯಿಗೆ ಹಾಕಿಕೊಂಡೆ. ಅದೇ ಚಿತ್ರ ವಾಟ್ಸ್ಆ್ಯಪ್ಗಳಲ್ಲಿ ಹರಿದಾಡಿತು. ಐಎಂಎ ವ್ಯವಸ್ಥಾಪಕರನ್ನು ರಕ್ಷಿಸುವ ಪ್ರಯತ್ನವನ್ನು ನಾನು ಎಲ್ಲಿಯೂ ಮಾಡಿಲ್ಲ. ರಾಜ್ಯದ ಪೊಲೀಸರ ತನಿಖೆ ಸರಿಯಿಲ್ಲ ಎಂದು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯಿಂದ ವರದಿ ಬಂದ ನಂತರ ನಾನೇ ಪೊಲೀಸ್ ಮಹಾ ನಿರ್ದೇಶಕರೊಂದಿಗೆ ಚರ್ಚಿಸಿ, ಸರಿಯಾಗಿ ತನಿಖೆ ಮಾಡಿ ಎಂದು ನಿರ್ದೇಶನ ನೀಡಿದ್ದೆ’ ಎಂದು ಕುಮಾರಸ್ವಾಮಿ ನೆನಪಿಸಿಕೊಂಡರು.